<p><strong>ಬೆಂಗಳೂರು:</strong> ‘₹ 190 ಕೋಟಿ ಬ್ಯಾಂಕ್ ಸಾಲ ಮರುಪಾವತಿ ಮಾಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧದ ಲುಕ್ಔಟ್ ನೋಟಿಸ್ ಹಿಂಪಡೆಯಲು ಸಿಬಿಐಗೆ ನಿರ್ದೇಶಿಸಬೇಕು’ ಎಂದು ಕ್ರೇನ್ಸ್ ಸಾಫ್ಟ್ವೇರ್ ಇಂಟರ್ನ್ಯಾಷನಲ್ ಲಿಮಿಟೆಡ್ನ ನಿರ್ದೇಶಕ ಆಸೀಫ್ ಖಾದರ್ ಕೋರಿಕೆಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.</p>.<p>ಈ ಕುರಿತಂತೆ ಆಸೀಫ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿದೆ.</p>.<p>‘ಅರ್ಜಿದಾರರು ಈ ಕುರಿತಂತೆ, ಸಿಬಿಐನ ಬ್ಯಾಂಕ್ ಸೆಕ್ಯುರಿಟೀಸ್ ಅಂಡ್ ಫ್ರಾಡ್ ಸೆಲ್ (ಬಿಎಸ್ ಅಂಡ್ ಎಫ್ಸಿ) ವಿಭಾಗದ ಎಸ್.ಪಿಗೆ ಮನವಿ ಸಲ್ಲಿಸಬೇಕು ಮತ್ತು ಈ ಮನವಿಯನ್ನು ಆರು ವಾರಗಳಲ್ಲಿ ಪರಿಗಣಿಸಿ ಸೂಕ್ತ ಆದೇಶ ನೀಡಬೇಕು. ಸಿಬಿಐ ಆದೇಶ ತೃಪ್ತಿಕರ ಎನಿಸದಿದ್ದರೆ ಅದನ್ನು ಅಧೀನ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು’ ಎಂದಿದೆ.</p>.<p><strong>ಪ್ರಕರಣವೇನು?:</strong> ಮೆಸರ್ಸ್ ಕ್ರೇನ್ಸ್ ಸಾಫ್ಟ್ವೇರ್ ಇಂಟರ್ ನ್ಯಾಷನಲ್ ಲಿಮಿ ಟೆಡ್ ಕಂಪನಿಯು ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ, ವ್ಯಾಪಾರ ಮತ್ತು ವಿತರಣೆಯ ವಹಿವಾಟು ಹೊಂದಿದೆ.</p>.<p>‘ಕಂಪನಿಯು ನಗರದ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ₹ 170 ಕೋಟಿ, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ನಿಂದ ₹ 20 ಕೋಟಿಯನ್ನು 2006ರ ಜೂನ್ನಿಂದ 2008ರ ನಡುವೆ ವಿವಿಧ ಕಂತುಗಳಲ್ಲಿ ಸಾಲ ಪಡೆದಿದೆ. ಇದನ್ನು ಹಿಂದಿರುಗಿಸಿಲ್ಲ’ ಎಂದು ಆರೋಪಿಸಿ ಬ್ಯಾಂಕ್ ಆಫ್ ಇಂಡಿಯಾದ ವಲಯ ಮ್ಯಾನೇಜರ್ 2017ರ ಮೇ 17ರಂದು ಸಿಬಿಐಗೆ ಮಾಹಿತಿ ನೀಡಿದ್ದರು.</p>.<p>ಇದರನ್ವಯ ಕಂಪನಿಯ ನಿರ್ದೇಶಕರಾದ ಆಸಿಫ್ ಖಾದರ್, ಮುಕ್ರಂ ಜಾನ್ ಮತ್ತು ಮುಯೀದ್ ಖಾದರ್ ಸೇರಿದಂತೆ ಕೆಲವು ಅಧಿಕಾರಿಗಳ ವಿರುದ್ಧ ಸಿಬಿಐ ದೂರು ದಾಖಲಿಸಿತ್ತು. ತನಿಖೆಯ ವೇಳೆ, ‘ಕಂಪನಿಯು, ಹಾಂಕಾಂಗ್ ಮತ್ತು ಶಾಂಘೈ ಬ್ಯಾಂಕಿಂಗ್ ಕಾರ್ಪೋರೇಷನ್ (ಎಚ್ಎಸ್ಬಿಸಿ) ನಿಂದಲೂ ಸಾಲ ಪಡೆದಿದೆ ಮತ್ತು ಈ ವಿಷಯವನ್ನು ಬ್ಯಾಂಕ್ ಆಫ್ ಇಂಡಿಯಾದ ಗಮನಕ್ಕೆ ತಂದಿರಲಿಲ್ಲ’ ಎಂಬ ಅಂಶ ಬಯಲಾಗಿತ್ತು.</p>.<p>ಏತನ್ಮಧ್ಯೆ ಆಸೀಫ್ ಖಾದರ್ ದುಬೈಗೆ ತೆರಳಿದ್ದಾರೆ ಎಂಬ ಮಾಹಿತಿ ಮೇರೆಗೆ ಲುಕ್ಔಟ್ ನೋಟಿಸ್ ಹೊರಡಿಸಲಾಗಿತ್ತು. ಆಸೀಫ್ 2017ರ ಡಿ 27ರಂದು ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಪೊಲೀಸರು ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ಪಡೆದಿದ್ದರು ಹಾಗೂ ಸಿಬಿಐ ಲುಕ್ಔಟ್ ನೋಟಿಸ್ ಜಾರಿಗೊಳಿಸಿರುವ ವಿಷಯ<br />ವನ್ನು ತಿಳಿಸಿದ್ದರು.</p>.<p><strong>‘10 ಬ್ಯಾಂಕುಗಳಲ್ಲಿ ₹ 861 ಕೋಟಿ ಸಾಲ’</strong><br />ವಿಚಾರಣೆ ವೇಳೆ ಅಸೀಫ್ ಪರ ಹಿರಿಯ ವಕೀಲ ಸಂದೇಶ್ ಜೆ.ಚೌಟ, ‘ಕಂಪನಿ ಹತ್ತು ಬ್ಯಾಂಕುಗಳಿಂದ ಒಟ್ಟು ₹ 861 ಕೋಟಿ ಸಾಲ ಪಡೆದಿದೆ. ಇದರಲ್ಲಿ ಈಗಾಗಲೇ ₹ 614 ಕೋಟಿ ಮರು ಪಾವತಿ ಮಾಡಿದೆ. ಸರಿಸುಮಾರು ₹ 250 ಕೋಟಿಯಷ್ಟು ಬಾಕಿ ಇದೆ’ ಎಂದು ತಿಳಿಸಿದ್ದರು.</p>.<p>ಇದಕ್ಕೆ ಪ್ರತಿಯಾಗಿ ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್, ‘ಅರ್ಜಿದಾರರು ಲುಕ್ಔಟ್ ನೋಟಿಸ್ ಹಿಂಪಡೆಯಲು ವಿಚಾರಣಾ ನ್ಯಾಯಾಲಯದಲ್ಲಿಯೇ ಮನವಿ ಸಲ್ಲಿಸಬೇಕು. ಅಷ್ಟಕ್ಕೂ ಈಗಾಗಲೇ ಆಸೀಫ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ನಿರಾಕರಿಸಿದೆ. ಹೀಗಾಗಿ ಈ ಅರ್ಜಿ ಮಾನ್ಯ ಮಾಡಬಾರದು’ ಎಂದು ಕೋರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘₹ 190 ಕೋಟಿ ಬ್ಯಾಂಕ್ ಸಾಲ ಮರುಪಾವತಿ ಮಾಡಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧದ ಲುಕ್ಔಟ್ ನೋಟಿಸ್ ಹಿಂಪಡೆಯಲು ಸಿಬಿಐಗೆ ನಿರ್ದೇಶಿಸಬೇಕು’ ಎಂದು ಕ್ರೇನ್ಸ್ ಸಾಫ್ಟ್ವೇರ್ ಇಂಟರ್ನ್ಯಾಷನಲ್ ಲಿಮಿಟೆಡ್ನ ನಿರ್ದೇಶಕ ಆಸೀಫ್ ಖಾದರ್ ಕೋರಿಕೆಯನ್ನು ಹೈಕೋರ್ಟ್ ತಳ್ಳಿ ಹಾಕಿದೆ.</p>.<p>ಈ ಕುರಿತಂತೆ ಆಸೀಫ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿದೆ.</p>.<p>‘ಅರ್ಜಿದಾರರು ಈ ಕುರಿತಂತೆ, ಸಿಬಿಐನ ಬ್ಯಾಂಕ್ ಸೆಕ್ಯುರಿಟೀಸ್ ಅಂಡ್ ಫ್ರಾಡ್ ಸೆಲ್ (ಬಿಎಸ್ ಅಂಡ್ ಎಫ್ಸಿ) ವಿಭಾಗದ ಎಸ್.ಪಿಗೆ ಮನವಿ ಸಲ್ಲಿಸಬೇಕು ಮತ್ತು ಈ ಮನವಿಯನ್ನು ಆರು ವಾರಗಳಲ್ಲಿ ಪರಿಗಣಿಸಿ ಸೂಕ್ತ ಆದೇಶ ನೀಡಬೇಕು. ಸಿಬಿಐ ಆದೇಶ ತೃಪ್ತಿಕರ ಎನಿಸದಿದ್ದರೆ ಅದನ್ನು ಅಧೀನ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು’ ಎಂದಿದೆ.</p>.<p><strong>ಪ್ರಕರಣವೇನು?:</strong> ಮೆಸರ್ಸ್ ಕ್ರೇನ್ಸ್ ಸಾಫ್ಟ್ವೇರ್ ಇಂಟರ್ ನ್ಯಾಷನಲ್ ಲಿಮಿ ಟೆಡ್ ಕಂಪನಿಯು ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ, ವ್ಯಾಪಾರ ಮತ್ತು ವಿತರಣೆಯ ವಹಿವಾಟು ಹೊಂದಿದೆ.</p>.<p>‘ಕಂಪನಿಯು ನಗರದ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ₹ 170 ಕೋಟಿ, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ನಿಂದ ₹ 20 ಕೋಟಿಯನ್ನು 2006ರ ಜೂನ್ನಿಂದ 2008ರ ನಡುವೆ ವಿವಿಧ ಕಂತುಗಳಲ್ಲಿ ಸಾಲ ಪಡೆದಿದೆ. ಇದನ್ನು ಹಿಂದಿರುಗಿಸಿಲ್ಲ’ ಎಂದು ಆರೋಪಿಸಿ ಬ್ಯಾಂಕ್ ಆಫ್ ಇಂಡಿಯಾದ ವಲಯ ಮ್ಯಾನೇಜರ್ 2017ರ ಮೇ 17ರಂದು ಸಿಬಿಐಗೆ ಮಾಹಿತಿ ನೀಡಿದ್ದರು.</p>.<p>ಇದರನ್ವಯ ಕಂಪನಿಯ ನಿರ್ದೇಶಕರಾದ ಆಸಿಫ್ ಖಾದರ್, ಮುಕ್ರಂ ಜಾನ್ ಮತ್ತು ಮುಯೀದ್ ಖಾದರ್ ಸೇರಿದಂತೆ ಕೆಲವು ಅಧಿಕಾರಿಗಳ ವಿರುದ್ಧ ಸಿಬಿಐ ದೂರು ದಾಖಲಿಸಿತ್ತು. ತನಿಖೆಯ ವೇಳೆ, ‘ಕಂಪನಿಯು, ಹಾಂಕಾಂಗ್ ಮತ್ತು ಶಾಂಘೈ ಬ್ಯಾಂಕಿಂಗ್ ಕಾರ್ಪೋರೇಷನ್ (ಎಚ್ಎಸ್ಬಿಸಿ) ನಿಂದಲೂ ಸಾಲ ಪಡೆದಿದೆ ಮತ್ತು ಈ ವಿಷಯವನ್ನು ಬ್ಯಾಂಕ್ ಆಫ್ ಇಂಡಿಯಾದ ಗಮನಕ್ಕೆ ತಂದಿರಲಿಲ್ಲ’ ಎಂಬ ಅಂಶ ಬಯಲಾಗಿತ್ತು.</p>.<p>ಏತನ್ಮಧ್ಯೆ ಆಸೀಫ್ ಖಾದರ್ ದುಬೈಗೆ ತೆರಳಿದ್ದಾರೆ ಎಂಬ ಮಾಹಿತಿ ಮೇರೆಗೆ ಲುಕ್ಔಟ್ ನೋಟಿಸ್ ಹೊರಡಿಸಲಾಗಿತ್ತು. ಆಸೀಫ್ 2017ರ ಡಿ 27ರಂದು ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಪೊಲೀಸರು ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ಪಡೆದಿದ್ದರು ಹಾಗೂ ಸಿಬಿಐ ಲುಕ್ಔಟ್ ನೋಟಿಸ್ ಜಾರಿಗೊಳಿಸಿರುವ ವಿಷಯ<br />ವನ್ನು ತಿಳಿಸಿದ್ದರು.</p>.<p><strong>‘10 ಬ್ಯಾಂಕುಗಳಲ್ಲಿ ₹ 861 ಕೋಟಿ ಸಾಲ’</strong><br />ವಿಚಾರಣೆ ವೇಳೆ ಅಸೀಫ್ ಪರ ಹಿರಿಯ ವಕೀಲ ಸಂದೇಶ್ ಜೆ.ಚೌಟ, ‘ಕಂಪನಿ ಹತ್ತು ಬ್ಯಾಂಕುಗಳಿಂದ ಒಟ್ಟು ₹ 861 ಕೋಟಿ ಸಾಲ ಪಡೆದಿದೆ. ಇದರಲ್ಲಿ ಈಗಾಗಲೇ ₹ 614 ಕೋಟಿ ಮರು ಪಾವತಿ ಮಾಡಿದೆ. ಸರಿಸುಮಾರು ₹ 250 ಕೋಟಿಯಷ್ಟು ಬಾಕಿ ಇದೆ’ ಎಂದು ತಿಳಿಸಿದ್ದರು.</p>.<p>ಇದಕ್ಕೆ ಪ್ರತಿಯಾಗಿ ಸಿಬಿಐ ಪರ ವಕೀಲ ಪಿ.ಪ್ರಸನ್ನಕುಮಾರ್, ‘ಅರ್ಜಿದಾರರು ಲುಕ್ಔಟ್ ನೋಟಿಸ್ ಹಿಂಪಡೆಯಲು ವಿಚಾರಣಾ ನ್ಯಾಯಾಲಯದಲ್ಲಿಯೇ ಮನವಿ ಸಲ್ಲಿಸಬೇಕು. ಅಷ್ಟಕ್ಕೂ ಈಗಾಗಲೇ ಆಸೀಫ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ನಿರಾಕರಿಸಿದೆ. ಹೀಗಾಗಿ ಈ ಅರ್ಜಿ ಮಾನ್ಯ ಮಾಡಬಾರದು’ ಎಂದು ಕೋರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>