ಮೈಸೂರು: ಜಿಲ್ಲೆಯ ಸರಗೂರು ತಾಲ್ಲೂಕಿನ ಹುಲ್ಲೇಮಾಳ ಗ್ರಾಮದಲ್ಲಿ ಪ್ರಕಾಶ್ (45) ಎಂಬುವವರನ್ನು ಆನೆಯೊಂದು ತುಳಿದು ಕೊಂದಿದೆ.
ಪ್ರಕಾಶ್ ಅವರು ತಮ್ಮ ಜಮೀನಿನಲ್ಲಿ ಕೊಯ್ಲು ಮಾಡಿದ್ದ ರಾಗಿಯನ್ನು ಕಾಯಲೆಂದು ಗುರುವಾರ ರಾತ್ರಿ ಅಲ್ಲೇ ಮಲಗಿದ್ದರು. ಆಗ ಆನೆಯೊಂದು ದಾಳಿ ನಡೆಸಿದೆ. ಅದರ ತುಳಿತಕ್ಕೆ ಸಿಕ್ಕ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶುಕ್ರವಾರ ಬೆಳಿಗ್ಗೆ ಕುಟುಂಬದವರು ಜಮೀನಿನ ಬಳಿಗೆ ಬಂದಾಗ ವಿಷಯ ಗೊತ್ತಾಗಿದೆ.