‘ಮಕ್ಕಳು ಗ್ರಾಮದ ಮನೆಯಿಂದ ಅಜ್ಜ-ಅಜ್ಜಿ ಇದ್ದ ತೋಟದ ಮನೆ ಕಡೆಗೆ ಹೋಗುವಾಗ ಘಟನೆ ನಡೆದಿದೆ. ಮಾಳಪ್ಪ ಕೈಲಿದ್ದ ಮೊಬೈಲ್ ಫೋನ್ ಕೈ ಜಾರಿ ಹೊಂಡಕ್ಕೆ ಬಿದ್ದಿದೆ. ಅದನ್ನು ತೆಗೆದುಕೊಳ್ಳಲು ಒಬ್ಬರ ನಂತರ ಒಬ್ಬರು ಪ್ರಯತ್ನಿಸಿದ್ದಾರೆ. ಈ ವೇಳೆ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
‘ಅಜ್ಜಿ ಲಕ್ಕವ್ವ ನೀರು ತರಲೆಂದು ಕೃಷಿ ಹೊಂಡಕ್ಕೆ ಬಂದಾಗ, ಮಕ್ಕಳು ನೀರಿನಲ್ಲಿ ಮುಳುಗಿರುವುದು ಗೊತ್ತಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಗೋಕಾಕ ಡಿವೈಎಸ್ಪಿ ಪ್ರಭು ಡಿ.ಟಿ. ಹಾಗೂ ಸಿಪಿಐ ಗೋಪಾಲ ರಾಠೋಡ ಸ್ಥಳ ಪರಿಶೀಲನೆ ನಡೆಸಿದರು.