‘ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ್ದು ಹಾಗೂ ಜಿಎಸ್ಟಿ ವಿಧಿಸಿದ್ದರಿಂದ ನೇಕಾರರು ಸಂಕಷ್ಟಕ್ಕೆ ಒಳಗಾಗಿದ್ದರು. ಬಳಿಕ ನೆರೆ ಮತ್ತು ಅತಿವೃಷ್ಟಿ ಅವರನ್ನು ಬಾಧಿಸಿತ್ತು. ಈಗ, ಲಾಕ್ಡೌನ್ನಿಂದ ಮತ್ತಷ್ಟು ನೋವುಂಡಿದ್ದಾರೆ. ಸಾಲ ತೀರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಪೂರ್ವ ಸಿದ್ಧತೆ ಇಲ್ಲದೆ ಘೋಷಣೆಯಾದ ಲಾಕ್ಡೌನ್ ಪರಿಸ್ಥಿತಿ ಎದುರಿಸಬೇಕಾಯಿತು. ಈ ವೇಳೆ, ನೆರವಿಗೆ ಧಾವಿಸಬೇಕಾಗಿದ್ದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೇಕಾರರು ಮತ್ತು ರೈತರ ಮೂಗಿಗೆ ತುಪ್ಪ ಸವರುವ ಕೆಲಸವನ್ನಷ್ಟೇ ಮಾಡುತ್ತಿವೆ’ ಎಂದು ದೂರಿದರು.