ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ದೆಹಲಿಯದ್ದು ಒಂದು ಊರಿಗೆ ಸೀಮಿತ ಚುನಾವಣೆ. ಆಮ್ ಆದ್ಮಿ ಪಕ್ಷದ ಜನಪ್ರಿಯ ಯೋಜನೆಗಳ ಘೋಷಣೆಗೆ ಆಕರ್ಷಿತರಾಗಿ ಜನ ಮತ ಕೊಟ್ಟಿದ್ದು,ಮುಂದೆ ಅವರಿಗೇ ನಿರಾಶೆ ಆಗಲಿದೆ. ಅಷ್ಟಕ್ಕೂ ದೆಹಲಿಯಲ್ಲಿ ಅಧಿಕಾರ ನಮ್ಮ (ಬಿಜೆಪಿ) ಬಳಿ ಇರಲಿಲ್ಲ. ಆಮ್ ಆದ್ಮಿ ಪಕ್ಷದ ಕೈಯಲ್ಲಿತ್ತು. ಅದನ್ನು ಅವರು ಉಳಿಸಿಕೊಂಡಿದ್ದಾರೆ. ಬಿಜೆಪಿ ಮತ ಗಳಿಕೆ ಪ್ರಮಾಣ ಏರಿಕೆ ಆಗಿರುವುದನ್ನು ವಿರೋಧಿಗಳು ಗಮನಿಸಬೇಕು‘ ಎಂದರು.