‘ಸರ್ಕಾರ ರಚನೆಯಾಗಿನಿಂದಲೂ ಕಾಂಗ್ರೆಸ್ನವರಿಂದ ಕಿರುಕುಳ ನಡೆಯುತ್ತಲೇ ಇತ್ತು. ಎರಡು ತಿಂಗಳಿಗೇ ನಾನು ರಾಜೀನಾಮೆ ನೀಡುತ್ತೇನೆ ಅಪ್ಪಾ ಎಂದು ಕುಮಾರಸ್ವಾಮಿ ನನ್ನ ಮುಂದೆ ಕಣ್ಣೀರು ಹಾಕಿದ. ನಾನು ಆಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತನಾಡಿದೆ. ಲೋಕಸಭಾ ಚುನಾವಣೆಯವರೆಗಾದರೂ ಈ ಮೈತ್ರಿ ಮುಂದುವರಿಯಬೇಕು, ಇಲ್ಲವಾದರೆ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡ ಸರ್ಕಾರದ ಗತಿ ಏನಾಯಿತು ಎಂದು ದೇಶ ಆಡಿಕೊಳ್ಳುವಂತಾಗುತ್ತದೆ ಎಂದು ಹೇಳಿದರು. ಅವರ ಮಾತಿಗೆ ಬೆಲೆ ಕೊಟ್ಟು ನೋವನ್ನು ಸಹಿಸಿಕೊಂಡಿರಲು ನಾನು ತಿಳಿಸಿದೆ’ ಎಂದು ಅವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆತಿಳಿಸಿದರು.