ಬೆಳೆ ಹಾನಿ, ಮನೆ ಕುಸಿತ ಮುಂತಾದ ಸಮಸ್ಯೆಗಳಿಂದ ಕ್ಷೇತ್ರದ ಜನರು ಸಂಕಷ್ಟದಲ್ಲಿದ್ದಾರೆ. ಆದರೆ, ಕ್ಷೇತ್ರದ ಶಾಸಕ ‘ಅನರ್ಹ’ನಾಗಿರುವುದರಿಂದ, ಜನರ ಕಷ್ಟ ಕೇಳಲು ಯಾರೂ ಇಲ್ಲದಂತಾಗಿದೆ. ತಂದೆ–ತಾಯಿಯಿಲ್ಲದ ತಬ್ಬಲಿಯಂತೆ ‘ತಾಲ್ಲೂಕು ಅನಾಥವಾಗಿದೆ’. ಮತ್ತೆ ವೋಟು ಕೇಳಲು ‘ಅನರ್ಹ’ ಶಾಸಕ ಬಂದಿದ್ದಾರೆ. ಅವರ ಜೀವನದಲ್ಲಿ ಮತ್ತೆ ರಾಜಕೀಯ ಎಂಬುದು ಇರಬಾರದು. ಆ ರೀತಿ ಹೀನಾಯವಾಗಿ ಸೋಲಿಸಿ ಅವರ ಮೂಲಸ್ಥಾನಕ್ಕೆ (ಸೊರಬ) ಕಳುಹಿಸಬೇಕು’ ಎಂದು ಆಕ್ರೋಶದಿಂದ ನುಡಿದರು.