<p><strong>ಬೆಂಗಳೂರು:</strong> ಸದನದಲ್ಲಿ ಸಚಿವ ಕೃಷ್ಣಭೈರೇಗೌಡಐಎಂಎ ಹಗರಣದ ವಿಚಾರ ಪ್ರಸ್ತಾಪಿಸಿದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ, ಇದಕ್ಕೆ ‘ಬಿರಿಯಾನಿ ತಿಂದವರು ಉತ್ತರ ಕೊಡಬೇಕು’ ಎಂದು ಕಟಕಿಯಾಡಿದರು.</p>.<p>ಸ್ವಯಂಪ್ರೇರಿತರಾಗಿ ಉತ್ತರ ನೀಡಲು ಎದ್ದು ನಿಂತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ಸಿ.ಟಿ.ರವಿ ಅವರು ಬಿರಿಯಾನಿ ತಿಂದವರು ಎಂದು ಪರೋಕ್ಷವಾಗಿ ನನ್ನನ್ನೇ ಉಲ್ಲೇಖಿಸಿದ್ದು’ ಎನ್ನುತ್ತಾ ವಿವರಣೆ ನೀಡಲು ಆರಂಭಿಸಿದರು.</p>.<p>‘ಮಾನ್ಯ ಸಭಾಧ್ಯಕ್ಷರೇ, ನಾನು ಬಿರಿಯಾನಿ ತಿಂದಿಲ್ಲ.ಎರಡನೇ ಬಾರಿ ಹೃದಯ ಶಸ್ತ್ರಚಿಕಿತ್ಸೆಯಾದ ನಂತರಮಾಂಸಾಹಾರ ಸೇವನೆ ಬಿಟ್ಟಿದ್ದೇನೆ. ಅಂದು ಅಲ್ಲಿ ಖರ್ಜೂರವೊಂದನ್ನು ಬಾಯಿಗೆ ಹಾಕಿಕೊಂಡಿದ್ದೆ ಅಷ್ಟೇ’’ ಎಂದು ಸ್ಪಷ್ಟನೆ ನೀಡಿದರು.</p>.<p>ಮುಖ್ಯಮಂತ್ರಿ ಪ್ರತಿಕ್ರಿಯೆ ವೇಳೆ ಮಧ್ಯಪ್ರವೇಶಿಸಿದಸ್ಪೀಕರ್ ರಮೇಶ್ ಕುಮಾರ್,‘ಆಪರೇಷನ್ ಆಯ್ತು ಅಂತ ಬಿರಿಯಾನಿ ತಿನ್ನೋದು ಬಿಡಬೇಡಿ. ನಾಟಿಕೋಳಿ–ಫಿಶ್ ತಗೊಳಿ. ನಾನು ನಿಮ್ಮ ಅಮ್ಮನ ಜೊತೆಗೆ ಮಾತಾಡ್ತೀನಿ’ ಎಂದು ತಮಾಷೆ ಮಾಡಿದರು. ಸದನ ನಗೆಗಡಲಲ್ಲಿ ತೇಲಿತು.</p>.<p>‘ಏನ್ರೀ ಈಶ್ವರಪ್ಪ ಇಷ್ಟೊಂದು ನಗ್ತಾ ಇದ್ದೀರಿ’ ಏಂದು ರಮೇಶ್ ಕುಮಾರ್ ಈಶ್ವರಪ್ಪ ಅವರನ್ನು ಪ್ರಶ್ನಿಸಿದರು. ‘ಸತ್ಯ ಹೇಳಿದ್ರಿ, ಅದಕ್ಕೇ ನಗ್ತಿದ್ದೀನಿ’ ಅಂತ ಈಶ್ವರಪ್ಪ ಇನ್ನಷ್ಟು ನಗು ತುಳುಕಿಸಿದರು.</p>.<p>ಮುಂಜಾನೆಯಿಂದ ಕಾವೇರಿದ ವಾತಾವರಣದಲ್ಲಿಯೇ ಚರ್ಚೆಯಲ್ಲಿ ಮುಳುಗಿದ್ದ ಸದಸ್ಯರಿಗೆ ಬಿರಿಯಾನಿ ಪ್ರಸಂಗ ತುಸು ಬಿಡುವು ನೀಡಿದ್ದು ಸುಳ್ಳಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸದನದಲ್ಲಿ ಸಚಿವ ಕೃಷ್ಣಭೈರೇಗೌಡಐಎಂಎ ಹಗರಣದ ವಿಚಾರ ಪ್ರಸ್ತಾಪಿಸಿದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕ ಸಿ.ಟಿ.ರವಿ, ಇದಕ್ಕೆ ‘ಬಿರಿಯಾನಿ ತಿಂದವರು ಉತ್ತರ ಕೊಡಬೇಕು’ ಎಂದು ಕಟಕಿಯಾಡಿದರು.</p>.<p>ಸ್ವಯಂಪ್ರೇರಿತರಾಗಿ ಉತ್ತರ ನೀಡಲು ಎದ್ದು ನಿಂತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ಸಿ.ಟಿ.ರವಿ ಅವರು ಬಿರಿಯಾನಿ ತಿಂದವರು ಎಂದು ಪರೋಕ್ಷವಾಗಿ ನನ್ನನ್ನೇ ಉಲ್ಲೇಖಿಸಿದ್ದು’ ಎನ್ನುತ್ತಾ ವಿವರಣೆ ನೀಡಲು ಆರಂಭಿಸಿದರು.</p>.<p>‘ಮಾನ್ಯ ಸಭಾಧ್ಯಕ್ಷರೇ, ನಾನು ಬಿರಿಯಾನಿ ತಿಂದಿಲ್ಲ.ಎರಡನೇ ಬಾರಿ ಹೃದಯ ಶಸ್ತ್ರಚಿಕಿತ್ಸೆಯಾದ ನಂತರಮಾಂಸಾಹಾರ ಸೇವನೆ ಬಿಟ್ಟಿದ್ದೇನೆ. ಅಂದು ಅಲ್ಲಿ ಖರ್ಜೂರವೊಂದನ್ನು ಬಾಯಿಗೆ ಹಾಕಿಕೊಂಡಿದ್ದೆ ಅಷ್ಟೇ’’ ಎಂದು ಸ್ಪಷ್ಟನೆ ನೀಡಿದರು.</p>.<p>ಮುಖ್ಯಮಂತ್ರಿ ಪ್ರತಿಕ್ರಿಯೆ ವೇಳೆ ಮಧ್ಯಪ್ರವೇಶಿಸಿದಸ್ಪೀಕರ್ ರಮೇಶ್ ಕುಮಾರ್,‘ಆಪರೇಷನ್ ಆಯ್ತು ಅಂತ ಬಿರಿಯಾನಿ ತಿನ್ನೋದು ಬಿಡಬೇಡಿ. ನಾಟಿಕೋಳಿ–ಫಿಶ್ ತಗೊಳಿ. ನಾನು ನಿಮ್ಮ ಅಮ್ಮನ ಜೊತೆಗೆ ಮಾತಾಡ್ತೀನಿ’ ಎಂದು ತಮಾಷೆ ಮಾಡಿದರು. ಸದನ ನಗೆಗಡಲಲ್ಲಿ ತೇಲಿತು.</p>.<p>‘ಏನ್ರೀ ಈಶ್ವರಪ್ಪ ಇಷ್ಟೊಂದು ನಗ್ತಾ ಇದ್ದೀರಿ’ ಏಂದು ರಮೇಶ್ ಕುಮಾರ್ ಈಶ್ವರಪ್ಪ ಅವರನ್ನು ಪ್ರಶ್ನಿಸಿದರು. ‘ಸತ್ಯ ಹೇಳಿದ್ರಿ, ಅದಕ್ಕೇ ನಗ್ತಿದ್ದೀನಿ’ ಅಂತ ಈಶ್ವರಪ್ಪ ಇನ್ನಷ್ಟು ನಗು ತುಳುಕಿಸಿದರು.</p>.<p>ಮುಂಜಾನೆಯಿಂದ ಕಾವೇರಿದ ವಾತಾವರಣದಲ್ಲಿಯೇ ಚರ್ಚೆಯಲ್ಲಿ ಮುಳುಗಿದ್ದ ಸದಸ್ಯರಿಗೆ ಬಿರಿಯಾನಿ ಪ್ರಸಂಗ ತುಸು ಬಿಡುವು ನೀಡಿದ್ದು ಸುಳ್ಳಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>