<p><strong>ಬೆಂಗಳೂರು: </strong>ವಿಧಾನಮಂಡಲ ಅಧಿವೇಶನವನ್ನು ವರ್ಷದಲ್ಲಿ ಕನಿಷ್ಠ 60 ದಿನಗಳಾದರೂ ನಡೆಸಬೇಕು ಎಂಬ ನಿಯಮವಿದೆ. ಇದರಿಂದ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದು ಆಶಯ. ಆದರೆ, 2019ರಲ್ಲಿ ಅತಿ ಕಡಿಮೆ ಎಂದರೆ 18 ದಿನಗಳು ಮಾತ್ರ ಕಲಾಪ ನಡೆದಿದೆ.</p>.<p>ಕಳೆದ 30 ವರ್ಷಗಳಲ್ಲಿ ಅತ್ಯಂತ ಕಡಿಮೆ ಕಲಾಪ ನಡೆದ ವರ್ಷವಾಗಿ ದಾಖಲೆಗೆ ಸೇರಿದೆ. ಈ 18 ದಿನಗಳಲ್ಲಿ ಒಂದೂ ಮಸೂದೆ ಅಂಗೀಕಾರವಾಗಿಲ್ಲ, ಪ್ರಶ್ನೋತ್ತರವೂ ನಡೆದಿಲ್ಲ. ನಾಲ್ಕು ಬಾರಿ ನಡೆದ ಅಧಿವೇಶನಗಳೂ ಅಲ್ಪಾವಧಿಯದ್ದಾಗಿದ್ದವು.</p>.<p>ಈ ಹಿಂದೆ 1989 ರಲ್ಲಿ ಕೇವಲ 17 ದಿನಗಳ ಕಲಾಪ ನಡೆದಿತ್ತು. ಇದು ರಾಜ್ಯದ ವಿಧಾನಮಂಡಲ ಇತಿಹಾಸದಲ್ಲಿ ಅತಿ ಕನಿಷ್ಠ ಕಲಾಪ ನಡೆದ ವರ್ಷ. ಆ ಬಳಿಕ ಕೆಲವು ವರ್ಷಗಳು ಸರಾಸರಿ 30 ರಿಂದ 40 ದಿನಗಳಷ್ಟು ಕಲಾಪ ನಡೆದಿವೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ವರ್ಷದಲ್ಲಿ ಕನಿಷ್ಠ 60 ದಿನಗಳು ಕಲಾಪ ನಡೆಯಬೇಕು ಎಂಬ ನಿಯಮ ಇದೆ. ಆದರೆ ಅದು ಕಾರ್ಯಗತವಾಗಿಲ್ಲ. ಹಲವು ವಿಧಾನಸಭಾಧ್ಯಕ್ಷರು ಈ ವಿಚಾರವನ್ನು ಪ್ರಸ್ತಾಪಿಸಿದ್ದರೂ 60 ದಿನಗಳ ಗಡಿಯನ್ನು ತಲುಪಲು ಸಾಧ್ಯವಾಗಿಲ್ಲ. ಆಡಳಿತ ಮತ್ತು ವಿರೋಧಪಕ್ಷಗಳ ಸಹಕಾರ ಇದ್ದಾಗ ಮಾತ್ರ ಸಾಧ್ಯ’ ಎಂದರು.</p>.<p>ಫೆಬ್ರುವರಿಯಲ್ಲಿ ನಡೆದ ಅಧಿವೇಶನದಲ್ಲಿ ಬಜೆಟ್ ಮಂಡಿಸಲಾಯಿತು. ಜುಲೈನಲ್ಲಿ ಎರಡು ಅಧಿವೇಶನಗಳು ನಡೆದವು, ಅದರಲ್ಲಿ ಒಂದು ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲು, ಇನ್ನೊಂದು ಮುಖ್ಯಮಂತ್ರಿ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲು ನಡೆಸಲಾಗಿತ್ತು. ಕೊನೆಯ ಅಧಿವೇಶನವನ್ನು ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್ಗೆ ಒಪ್ಪಿಗೆ ಪಡೆಯಲು ಕರೆಯಲಾಗಿತ್ತು.</p>.<p>ಈ ಬಾರಿ ಮಳೆ, ಪ್ರವಾಹ, ಭೂಕುಸಿತ, ಬೆಲೆ ಏರಿಕೆ ಸೇರಿದಂತೆ ಹಲವು ಜ್ವಲಂತ ವಿಷಯಗಳಿದ್ದವು. ಈ ಬಗ್ಗೆ ಚರ್ಚೆ ನಡೆಸುವ ಮೂಲಕ ಅದಕ್ಕೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ರಾಜ್ಯದ ಜನರದ್ದಾಗಿತ್ತು. ಆದರೆ, ಈ ಬಗ್ಗೆ ಚರ್ಚೆ ನಡೆದೇ ಇಲ್ಲ, ಗದ್ದಲವೇ ಹೆಚ್ಚಾಗಿತ್ತು. 17 ಶಾಸಕರ ರಾಜೀನಾಮೆ, ಅವರ ಮುಂಬೈ ವಾಸ್ತವ್ಯ ವಿಷಯ ಕುರಿತ ಕೆಸರೆರಚಾಟ ನಡೆದದ್ದೇ ಹೆಚ್ಚು.</p>.<p><strong>ಮಸೂದೆ ಮೇಲೆ 2 ದಿನ ಚರ್ಚೆ ಕಡ್ಡಾಯ: </strong>ಇನ್ನು ಮುಂದೆ ಮಸೂದೆಯ ಮೇಲೆ ಕನಿಷ್ಠ ಎರಡು ದಿನಗಳು ಚರ್ಚೆ ನಡೆಸಬೇಕು. ಆ ಬಳಿಕವೇ ಅದನ್ನು ಒಪ್ಪಿಗೆಗೆ ಮಂಡಿಸಬೇಕು ಎಂಬುದನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಡ್ಡಾಯ ಮಾಡಿದ್ದಾರೆ.</p>.<p>ಬಹುತೇಕ ಸಂದರ್ಭಗಳಲ್ಲಿ ಮಹತ್ವದ ಮಸೂದೆಗಳನ್ನು ಮಂಡಿಸಿ, ಅದೇ ದಿನ ಒಪ್ಪಿಗೆ ಪಡೆಯಲು ಸರ್ಕಾರ ಒತ್ತಡ ಹೇರುತ್ತದೆ. ಅಂತಿಮವಾಗಿ ಚರ್ಚೆ ನಡೆಸದೇ ಒಪ್ಪಿಗೆ ಪಡೆಯಲಾಗುತ್ತದೆ. ಇದು ಸರಿಯಲ್ಲ, ಇದರಿಂದ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.</p>.<p>ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಮಸೂದೆಯ ಕುರಿತು ಚರ್ಚೆ ಮಾಡದೇ ಒಪ್ಪಿಗೆ ಪಡೆಯಲಾಗಿತ್ತು. ಇದರಿಂದ ಸಾಕಷ್ಟು ಶಿಕ್ಷಕರು ತೊಂದರೆಗೆ ಸಿಲುಕಬೇಕಾಯಿತು. ಇನ್ನು ಮುಂದೆ ಅಂತಹ ಎಡವಟ್ಟಿಗೆ ಅವಕಾಶ ನೀಡದೇ ಇರಲು ಸಭಾಧ್ಯಕ್ಷರು ತೀರ್ಮಾನಿಸಿದ್ದಾರೆ.</p>.<p><strong>ಮಸೂದೆ: 2 ದಿನ ಚರ್ಚೆ ಕಡ್ಡಾಯ</strong><br />ಇನ್ನು ಮುಂದೆ ಮಸೂದೆಯ ಮೇಲೆ ಕನಿಷ್ಠ ಎರಡು ದಿನಗಳು ಚರ್ಚೆ ನಡೆಸಬೇಕು. ಆ ಬಳಿಕವೇ ಅದನ್ನು ಒಪ್ಪಿಗೆಗೆ ಮಂಡಿಸಬೇಕು ಎಂಬುದನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಡ್ಡಾಯ ಮಾಡಿದ್ದಾರೆ.</p>.<p>ಬಹುತೇಕ ಸಂದರ್ಭಗಳಲ್ಲಿ ಮಹತ್ವದ ಮಸೂದೆಗಳನ್ನು ಮಂಡಿಸಿ, ಅದೇ ದಿನ ಒಪ್ಪಿಗೆ ಪಡೆಯಲು ಸರ್ಕಾರ ಒತ್ತಡ ಹೇರುತ್ತದೆ. ಅಂತಿಮವಾಗಿ ಚರ್ಚೆ ನಡೆಸದೇ ಒಪ್ಪಿಗೆ ಪಡೆಯಲಾಗುತ್ತದೆ. ಇದು ಸರಿಯಲ್ಲ, ಇದರಿಂದ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.</p>.<p>ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಮಸೂದೆಯ ಕುರಿತು ಚರ್ಚೆ ಮಾಡದೇ ಒಪ್ಪಿಗೆ ಪಡೆಯಲಾಗಿತ್ತು. ಇದರಿಂದ ಸಾಕಷ್ಟು ಶಿಕ್ಷಕರು ತೊಂದರೆಗೆ ಸಿಲುಕಬೇಕಾಯಿತು. ಇನ್ನು ಮುಂದೆ ಅಂತಹ ಎಡವಟ್ಟಿಗೆ ಅವಕಾಶ ನೀಡದೇ ಇರಲು ಸಭಾಧ್ಯಕ್ಷರು ತೀರ್ಮಾನಿಸಿದ್ದಾರೆ.</p>.<p><strong>ಕಲಾಪದ ಅಂಕಿ– ಅಂಶ</strong></p>.<p><strong>ಅತಿ ಹೆಚ್ಚು</strong></p>.<p>1972; 82 ದಿನಗಳು<br />1976; 73ದಿನಗಳು</p>.<p><strong>ಅತಿ ಕಡಿಮೆ</strong></p>.<p>1989; 17 ದಿನಗಳು<br />2019; 18ದಿನಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ವಿಧಾನಮಂಡಲ ಅಧಿವೇಶನವನ್ನು ವರ್ಷದಲ್ಲಿ ಕನಿಷ್ಠ 60 ದಿನಗಳಾದರೂ ನಡೆಸಬೇಕು ಎಂಬ ನಿಯಮವಿದೆ. ಇದರಿಂದ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದು ಆಶಯ. ಆದರೆ, 2019ರಲ್ಲಿ ಅತಿ ಕಡಿಮೆ ಎಂದರೆ 18 ದಿನಗಳು ಮಾತ್ರ ಕಲಾಪ ನಡೆದಿದೆ.</p>.<p>ಕಳೆದ 30 ವರ್ಷಗಳಲ್ಲಿ ಅತ್ಯಂತ ಕಡಿಮೆ ಕಲಾಪ ನಡೆದ ವರ್ಷವಾಗಿ ದಾಖಲೆಗೆ ಸೇರಿದೆ. ಈ 18 ದಿನಗಳಲ್ಲಿ ಒಂದೂ ಮಸೂದೆ ಅಂಗೀಕಾರವಾಗಿಲ್ಲ, ಪ್ರಶ್ನೋತ್ತರವೂ ನಡೆದಿಲ್ಲ. ನಾಲ್ಕು ಬಾರಿ ನಡೆದ ಅಧಿವೇಶನಗಳೂ ಅಲ್ಪಾವಧಿಯದ್ದಾಗಿದ್ದವು.</p>.<p>ಈ ಹಿಂದೆ 1989 ರಲ್ಲಿ ಕೇವಲ 17 ದಿನಗಳ ಕಲಾಪ ನಡೆದಿತ್ತು. ಇದು ರಾಜ್ಯದ ವಿಧಾನಮಂಡಲ ಇತಿಹಾಸದಲ್ಲಿ ಅತಿ ಕನಿಷ್ಠ ಕಲಾಪ ನಡೆದ ವರ್ಷ. ಆ ಬಳಿಕ ಕೆಲವು ವರ್ಷಗಳು ಸರಾಸರಿ 30 ರಿಂದ 40 ದಿನಗಳಷ್ಟು ಕಲಾಪ ನಡೆದಿವೆ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ವರ್ಷದಲ್ಲಿ ಕನಿಷ್ಠ 60 ದಿನಗಳು ಕಲಾಪ ನಡೆಯಬೇಕು ಎಂಬ ನಿಯಮ ಇದೆ. ಆದರೆ ಅದು ಕಾರ್ಯಗತವಾಗಿಲ್ಲ. ಹಲವು ವಿಧಾನಸಭಾಧ್ಯಕ್ಷರು ಈ ವಿಚಾರವನ್ನು ಪ್ರಸ್ತಾಪಿಸಿದ್ದರೂ 60 ದಿನಗಳ ಗಡಿಯನ್ನು ತಲುಪಲು ಸಾಧ್ಯವಾಗಿಲ್ಲ. ಆಡಳಿತ ಮತ್ತು ವಿರೋಧಪಕ್ಷಗಳ ಸಹಕಾರ ಇದ್ದಾಗ ಮಾತ್ರ ಸಾಧ್ಯ’ ಎಂದರು.</p>.<p>ಫೆಬ್ರುವರಿಯಲ್ಲಿ ನಡೆದ ಅಧಿವೇಶನದಲ್ಲಿ ಬಜೆಟ್ ಮಂಡಿಸಲಾಯಿತು. ಜುಲೈನಲ್ಲಿ ಎರಡು ಅಧಿವೇಶನಗಳು ನಡೆದವು, ಅದರಲ್ಲಿ ಒಂದು ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲು, ಇನ್ನೊಂದು ಮುಖ್ಯಮಂತ್ರಿ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲು ನಡೆಸಲಾಗಿತ್ತು. ಕೊನೆಯ ಅಧಿವೇಶನವನ್ನು ಕುಮಾರಸ್ವಾಮಿ ಮಂಡಿಸಿದ್ದ ಬಜೆಟ್ಗೆ ಒಪ್ಪಿಗೆ ಪಡೆಯಲು ಕರೆಯಲಾಗಿತ್ತು.</p>.<p>ಈ ಬಾರಿ ಮಳೆ, ಪ್ರವಾಹ, ಭೂಕುಸಿತ, ಬೆಲೆ ಏರಿಕೆ ಸೇರಿದಂತೆ ಹಲವು ಜ್ವಲಂತ ವಿಷಯಗಳಿದ್ದವು. ಈ ಬಗ್ಗೆ ಚರ್ಚೆ ನಡೆಸುವ ಮೂಲಕ ಅದಕ್ಕೆ ಪರಿಹಾರ ಸಿಗಬಹುದು ಎಂಬ ನಿರೀಕ್ಷೆ ರಾಜ್ಯದ ಜನರದ್ದಾಗಿತ್ತು. ಆದರೆ, ಈ ಬಗ್ಗೆ ಚರ್ಚೆ ನಡೆದೇ ಇಲ್ಲ, ಗದ್ದಲವೇ ಹೆಚ್ಚಾಗಿತ್ತು. 17 ಶಾಸಕರ ರಾಜೀನಾಮೆ, ಅವರ ಮುಂಬೈ ವಾಸ್ತವ್ಯ ವಿಷಯ ಕುರಿತ ಕೆಸರೆರಚಾಟ ನಡೆದದ್ದೇ ಹೆಚ್ಚು.</p>.<p><strong>ಮಸೂದೆ ಮೇಲೆ 2 ದಿನ ಚರ್ಚೆ ಕಡ್ಡಾಯ: </strong>ಇನ್ನು ಮುಂದೆ ಮಸೂದೆಯ ಮೇಲೆ ಕನಿಷ್ಠ ಎರಡು ದಿನಗಳು ಚರ್ಚೆ ನಡೆಸಬೇಕು. ಆ ಬಳಿಕವೇ ಅದನ್ನು ಒಪ್ಪಿಗೆಗೆ ಮಂಡಿಸಬೇಕು ಎಂಬುದನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಡ್ಡಾಯ ಮಾಡಿದ್ದಾರೆ.</p>.<p>ಬಹುತೇಕ ಸಂದರ್ಭಗಳಲ್ಲಿ ಮಹತ್ವದ ಮಸೂದೆಗಳನ್ನು ಮಂಡಿಸಿ, ಅದೇ ದಿನ ಒಪ್ಪಿಗೆ ಪಡೆಯಲು ಸರ್ಕಾರ ಒತ್ತಡ ಹೇರುತ್ತದೆ. ಅಂತಿಮವಾಗಿ ಚರ್ಚೆ ನಡೆಸದೇ ಒಪ್ಪಿಗೆ ಪಡೆಯಲಾಗುತ್ತದೆ. ಇದು ಸರಿಯಲ್ಲ, ಇದರಿಂದ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.</p>.<p>ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಮಸೂದೆಯ ಕುರಿತು ಚರ್ಚೆ ಮಾಡದೇ ಒಪ್ಪಿಗೆ ಪಡೆಯಲಾಗಿತ್ತು. ಇದರಿಂದ ಸಾಕಷ್ಟು ಶಿಕ್ಷಕರು ತೊಂದರೆಗೆ ಸಿಲುಕಬೇಕಾಯಿತು. ಇನ್ನು ಮುಂದೆ ಅಂತಹ ಎಡವಟ್ಟಿಗೆ ಅವಕಾಶ ನೀಡದೇ ಇರಲು ಸಭಾಧ್ಯಕ್ಷರು ತೀರ್ಮಾನಿಸಿದ್ದಾರೆ.</p>.<p><strong>ಮಸೂದೆ: 2 ದಿನ ಚರ್ಚೆ ಕಡ್ಡಾಯ</strong><br />ಇನ್ನು ಮುಂದೆ ಮಸೂದೆಯ ಮೇಲೆ ಕನಿಷ್ಠ ಎರಡು ದಿನಗಳು ಚರ್ಚೆ ನಡೆಸಬೇಕು. ಆ ಬಳಿಕವೇ ಅದನ್ನು ಒಪ್ಪಿಗೆಗೆ ಮಂಡಿಸಬೇಕು ಎಂಬುದನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಡ್ಡಾಯ ಮಾಡಿದ್ದಾರೆ.</p>.<p>ಬಹುತೇಕ ಸಂದರ್ಭಗಳಲ್ಲಿ ಮಹತ್ವದ ಮಸೂದೆಗಳನ್ನು ಮಂಡಿಸಿ, ಅದೇ ದಿನ ಒಪ್ಪಿಗೆ ಪಡೆಯಲು ಸರ್ಕಾರ ಒತ್ತಡ ಹೇರುತ್ತದೆ. ಅಂತಿಮವಾಗಿ ಚರ್ಚೆ ನಡೆಸದೇ ಒಪ್ಪಿಗೆ ಪಡೆಯಲಾಗುತ್ತದೆ. ಇದು ಸರಿಯಲ್ಲ, ಇದರಿಂದ ಸಮಾಜದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.</p>.<p>ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದ ಮಸೂದೆಯ ಕುರಿತು ಚರ್ಚೆ ಮಾಡದೇ ಒಪ್ಪಿಗೆ ಪಡೆಯಲಾಗಿತ್ತು. ಇದರಿಂದ ಸಾಕಷ್ಟು ಶಿಕ್ಷಕರು ತೊಂದರೆಗೆ ಸಿಲುಕಬೇಕಾಯಿತು. ಇನ್ನು ಮುಂದೆ ಅಂತಹ ಎಡವಟ್ಟಿಗೆ ಅವಕಾಶ ನೀಡದೇ ಇರಲು ಸಭಾಧ್ಯಕ್ಷರು ತೀರ್ಮಾನಿಸಿದ್ದಾರೆ.</p>.<p><strong>ಕಲಾಪದ ಅಂಕಿ– ಅಂಶ</strong></p>.<p><strong>ಅತಿ ಹೆಚ್ಚು</strong></p>.<p>1972; 82 ದಿನಗಳು<br />1976; 73ದಿನಗಳು</p>.<p><strong>ಅತಿ ಕಡಿಮೆ</strong></p>.<p>1989; 17 ದಿನಗಳು<br />2019; 18ದಿನಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>