‘ಚುನಾವಣೆ ಮುಂದೂಡಲು ಆದೇಶಿಸಿರುವ ಸಹಕಾರ ಇಲಾಖೆ ಇದಕ್ಕೆ ಸೂಕ್ತ ಕಾರಣ ನೀಡಿಲ್ಲ. ಒಮ್ಮೆ ವೇಳಾಪಟ್ಟಿ ಘೋಷಣೆಯಾದ ಮೇಲೆ ಚುನಾವಣೆ ಮುಂದೂಡುವುದು ಕಾನೂನು ಬಾಹಿರ. ಆದ್ದರಿಂದ ಯಾವ ಹಂತದಲ್ಲಿ ಚುನಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದೆಯೋ ಆ ಹಂತದಿಂದಲೇ ಚುನಾವಣೆ ನಡೆಯುವಂತೆ ನಿರ್ದೇಶಿಸಬೇಕು. ಮುಂದೂಡಿಕೆಗಾಗಿ ಜುಲೈ 29ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.