ಮಂಗಳೂರಿನ ವೆಂಕಟೇಶ್ ನಾಯಕ್ ಅವರ 'ವಾಟೇ ವಯಲೆಂ ರಗತ' ಕವನ ಸಂಕಲನ, ಪಿಯುಸ್ ಪಿದಲಿಸ್ ಪಿಂಟೊ ಅವರ 'ಕೆನರಾಂತ್ ಪಾದ್ರೊವಾದೊ ಅನಿ ಪ್ರೊಪಗಾಂದಾಚೊ ವಿವಾದ್' ಅಧ್ಯಯನ ಕೃತಿ, ಕ್ಲೆರೆನ್ಸ್ ಡೊನಾಲ್ಡ್ ಪಿಂಟೊ ಅವರ 'ಕಥಾಮೃತ್' ಸಣ್ಣಕತೆ ವಿಭಾಗದಲ್ಲಿ ಪುಸ್ತಕ ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಪುರಸ್ಕಾರವು ₹ 5 ಸಾವಿರ ನಗದು, ಪ್ರಶಸ್ತಿ ಪತ್ರ, ಫಲಕಗಳನ್ನು ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ. ಜಗದೀಶ್ ಪೈ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.