‘ರಮೇಶ ಕತ್ತಿ ಪಕ್ಷದ ಹಿರಿಯ ನಾಯಕರಿದ್ದಾರೆ. ಎಲ್ಲರೂ ಆಕಾಂಕ್ಷಿಗಳೇ, ಹುದ್ದೆಗಳಿಗೆ ಆಸೆ ಪಡಲೂಬಹುದು. ಅದನ್ನು ಬೀದಿಯಲ್ಲಿ ಹೇಳಿಕೊಂಡರೆ ಏನರ್ಥ? ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಪಕ್ಷ ಟಿಕೆಟ್ ಕೊಡುವವರನ್ನು ನಾವು ಬೆಂಬಲಿಸುತ್ತೇವೆ. ಎಲ್ಲರೂ ಅದೇ ಕೆಲಸ ಮಾಡುತ್ತಾರೆ’. ‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬೇಕು ಎಂಬ ಯತ್ನ ಪಕ್ಷದ ಒಳಗೇ ನಡೆಯುತ್ತಿದೆಯಂತಲ್ಲಾ’ ಎಂಬ ಪ್ರಶ್ನೆಗೆ, ‘ನಿಮ್ಮಿಂದಲೇ ಈ ವಿಷಯ ಕೇಳುತ್ತಿದ್ದೇನೆ. ಆ ರೀತಿಯ ಚರ್ಚೆ ಪಕ್ಷದಲ್ಲಿ ನಡೆದಿಲ್ಲ’ ಎಂದು ಉತ್ತರಿಸಿದರು.