ಮರಾಠಿ ಓದುಗರಿಗೆ ಸ್ವಾಮೀಜಿ ಅವರ ಪರಿಚಯ ಇಲ್ಲ. ಇಲ್ಲಿನವರಿಗೂ ಅವರ ಕಾರ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕೆಲಸ ಕೈಗೊಂಡಿದ್ದೇವೆ. ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು, ಅರವಿಂದ ಜತ್ತಿ, ನಾಗನೂರು ರುದ್ರಾಕ್ಷಿ ಮಠದ ಶ್ರೀಗಳು ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ 32 ಮಂದಿಯ ಲೇಖನಗಳು ಇರಲಿವೆ ಎಂದು ತಿಳಿಸಿದರು.