‘ದೇಶದಲ್ಲಿ ಒಂದೇ ಧರ್ಮ, ಭಾಷೆ ಹಾಗೂ ಬಣ್ಣ (ಕೇಸರಿ) ಇರಬೇಕು ಎನ್ನುವುದು ಅಪಾಯಕಾರಿಯಾದುದು. ಸಂವಿಧಾನ ಸುಡುತ್ತೇವೆ ಎನ್ನುತ್ತಾರೆ. ಅದೇನು ಅವರಪ್ಪನ ಮನೆ ಆಸ್ತಿಯೇ? ಈ ಸರ್ಕಾರದಲ್ಲಿ, ಪ್ರಶ್ನಿಸುವವರನ್ನು ಬಂಧಿಸಲಾಗುತ್ತಿದೆ. ಇದೇ ಸರ್ಕಾರ ಮುಂದುವರಿದರೆ ನಾವೆಲ್ಲ ಅರೆಸ್ಟ್ ಆಗಬಹುದು. ವಿಶೇಷ ನ್ಯಾಯಾಲಯದಿಂದ ಶಿಕ್ಷಿಸಲೂಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.