‘ಮೀನುಗಾರಿಕೆ ಸಲುವಾಗಿ ಬ್ಯಾಂಕ್ಗಳಲ್ಲಿ ಮಾಡಿದ್ದ ಸಾಲದ ಕಂತುಗಳನ್ನು ಸದ್ಯಕ್ಕೆ ವಸೂಲಿ ಮಾಡದಂತೆ ಸೂಚನೆಯಿದೆ. ಆದರೆ, ಲಾಕ್ಡೌನ್ ಅವಧಿ ಮುಗಿದ ಬಳಿಕ ಮೀನುಗಾರರ ಮನೆ, ಜಮೀನು, ಆಸ್ತಿ ಮುಟ್ಟುಗೋಲು ಹಾಕುವ ಪ್ರಕರಣಗಳು ಹೆಚ್ಚು ವರದಿಯಾಗಬಹುದು.ಈ ಋತುವಿನಲ್ಲಿ ಆದಾಯವೇ ಬಾರದ ಕಾರಣ ಮೀನುಗಾರರು ಕಂತನ್ನು ಹೇಗೆ ಕಟ್ಟಲು ಸಾಧ್ಯ? ಈ ನಿಟ್ಟಿನಲ್ಲಿ ಗಮನ ಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.