ಸಚಿವರು ಉತ್ತರ ಕೊಟ್ಟು, ಚರ್ಚೆ ಇಲ್ಲಿಗೆ ಮುಗಿಯಿತು ಎಂದು ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದ ಮೇಲೂ ಐವನ್ ಡಿಸೋಜ, ನಾರಾಯಣ ಸ್ವಾಮಿ, ಅಬ್ದುಲ್ ಜಬ್ಬಾರ್, ಅಬ್ದುಲ್ ನಜೀರ್, ಕೆ.ಟಿ.ಶ್ರೀಕಂಠೇಗೌಡ, ಅರವಿಂದ ಕುಮಾರ ಅರಳಿ, ಪ್ರಕಾಶ್ ರಾಠೋಡ್, ಎಸ್.ಆರ್.ಪಾಟೀಲ ಅವರು ಇನ್ನಷ್ಟು ಪ್ರಶ್ನೆ ಕೇಳಿದರು. ಸಚಿವರು ಮತ್ತೊಮ್ಮೆ ಉತ್ತರ ನೀಡಿ ಸರ್ಕಾರದ ಅಚಲ ಧೋರಣೆ ಪ್ರದರ್ಶಿಸಿದರು.