ಕಾಂಗ್ರೆಸ್ನ ಕೆ.ಆರ್.ರಮೇಶ್ ಕುಮಾರ್, ‘ಈ ಯೋಜನೆಗೆ ಸಿಗುವುದು 24 ಟಿಎಂಸಿ ಅಡಿ ನೀರು. ಬರದಿಂದ ತತ್ತರಿಸಿರುವ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗೆ 8 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಆದರೆ, ಒಂದೇ ಒಂದು ತೊಟ್ಟು ನೀರು ಇಲ್ಲಿಯವರೆಗೆ ಬಂದಿಲ್ಲ. ಬೆಂಗಳೂರಿನ ಕೊಳಚೆ ನೀರನ್ನಾದರೂ ಶುದ್ಧೀಕರಿಸಿ ಕೊಡಿ ಎಂದು ನಾವು ದಯನೀಯವಾಗಿ ಬೇಡುತ್ತಿದ್ದೇವೆ. ಹೀಗಿದೆ ನಮ್ಮ ಪರಿಸ್ಥಿತಿ. ಆದರೆ, ಯೋಜನೆ ಅನುಷ್ಠಾನಕ್ಕೆ ಮುನ್ನವೇ ಬೇರೆ ಬೇರೆ ಜಿಲ್ಲೆಯವರು ಬೇಡಿಕೆ ಮಂಡಿಸುತ್ತಿದ್ದಾರೆ. ಈ ರೀತಿ ಮಾತನಾಡುವುದು ಸರಿಯಲ್ಲ’ ಎಂದು ಸೂಚ್ಯವಾಗಿ ಹೇಳಿದರು.