<p><strong>ಬಳ್ಳಾರಿ:</strong> ತಾಲ್ಲೂಕಿನ ಹರಗಿನಡೋಣಿ– ಕುಡುತಿನಿಯ ನಡುವಿನ ದೂರ 7 ಕಿ.ಮೀ ಆದರೆ ಅಲ್ಲಿಗೆ ತಲುಪಲು ಗ್ರಾಮಸ್ಥರು 40 ಕಿ.ಮೀ ಸುತ್ತುಬಳಸಿ ಸಂಚರಿಸಬೇಕಾಗಿದೆ. ಮೂರು ವರ್ಷಗಳಿಂದಲೂ ಈ ಗ್ರಾಮಸ್ಥರು ಬಳ್ಳಾರಿ ಬಳಸಿಕೊಂಡು ಸಂಚರಿಸುತ್ತಿದ್ದಾರೆ.</p>.<p>ಕಾರಣ, ಉಕ್ಕು ಕಾರ್ಖಾನೆ ಸ್ಥಾಪಿಸುವುದಾಗಿ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ ಅರ್ಸೆಲರ್ ಮಿತ್ತಲ್ ಇಂಡಿಯಾ ಕಂಪನಿಯು 4,900 ಎಕರೆ ಜಮೀನನ್ನು 7 ವರ್ಷಗಳ ಹಿಂದೆಯೇ ಖರೀದಿಸಿತ್ತು. ಈ ಜಮೀನಿನ ಬಳಿಯೇ ರಾಜ್ಯ ಹೆದ್ದಾರಿ ಹಾದು ಹೋಗುತ್ತದೆ. ಮೂರು ವರ್ಷಗಳ ಹಿಂದೆ ತನ್ನ ಜಮೀನು ಸೇರಿಸಿ, ರಾಜ್ಯ ಹೆದ್ದಾರಿಗೇ ಗೇಟ್ ಹಾಕಿ ಸಂಚಾರವನ್ನು ಬಂದ್ ಮಾಡಿದೆ.</p>.<p>ಈವರೆಗೆ ಕಾರ್ಖಾನೆಯನ್ನೂ ಸ್ಥಾಪಿಸಿಲ್ಲ. ರಸ್ತೆಗೆ ಅಡ್ಡಲಾಗಿ ಹಾಕಿರುವ ಗೇಟ್ ಅನ್ನೂ ಸಂಚಾರಕ್ಕೆ ಮುಕ್ತಗೊಳಿಸಿಲ್ಲ. ಕುಡುತಿನಿ ಹಾಗೂ ಹರಗಿನಡೋಣಿ ಗ್ರಾಮದವರು ಒಳ ರಸ್ತೆಯಿಂದ ಹೋದರೂ 15 ಕಿ.ಮೀ ಬಳಸಿ ಪ್ರಯಾಣಿಸಲೇಬೇಕು.</p>.<p>‘ರಸ್ತೆಯನ್ನು ಸೇರಿಸಿ ಜಮೀನು ಖರೀದಿಸಿರುವುದರಿಂದ ನಿಮಗೆ ಇಲ್ಲಿ ಸಂಚರಿಸಲು ಅವಕಾಶವಿಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳುತ್ತಾರೆ. ಪರ್ಯಾಯ ರಸ್ತೆ ಮಾಡಿಕೊಡುವುದಾಗಿ ಜಿಲ್ಲಾಡಳಿತ ನೀಡಿದ ಭರವಸೆಯೂ ಈಡೇರಿಲ್ಲ’ ಎಂದು ಗ್ರಾಮದ ದೊಡ್ಡನಗೌಡ ‘ಪ್ರಜಾವಾಣಿ’ಯೊಂದಿಗೆ ಅಸಹಾಯಕತೆ ತೋಡಿಕೊಂಡರು.</p>.<p>‘ವೇಣಿವೀರಾಪುರ ಮಾರ್ಗದ ಮೂಲಕ ಕುಡುತಿನಿಗೆ ಸಂಚರಿಸುವ ಖಾಸಗಿ ಬಸ್ ಬಿಟ್ಟರೆ ನಾವು, ಬಳ್ಳಾರಿಗೆ ಬಂದೇ ಕುಡುತಿನಿ, ಹೊಸಪೇಟೆ ಕಡೆಗೆ ತೆರಳಬೇಕಾಗಿದೆ. ನಮಗೇಕೆ ಈ ಕಷ್ಟ ಕೊಟ್ಟಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದರು.</p>.<p><strong>ಸಭೆಗೆ ನಾಲ್ಕು ತಿಂಗಳು:</strong> ಜನವರಿ 10ರಂದು ನಗರದಲ್ಲಿ ನಡೆದಿದ್ದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಹರಗಿನಡೋಣಿಯ ನಿವಾಸಿಗಳು ಈ ಸಮಸ್ಯೆಯ ಬಗ್ಗೆ ಸಂಸದ ವಿ.ಎಸ್.ಉಗ್ರಪ್ಪ ಅವರ ಗಮನ ಸೆಳೆದಿದ್ದರು.</p>.<p>‘ಜಮೀನಿನಲ್ಲಿ ಕೈಗಾರಿಕೆಯನ್ನೂ ಸ್ಥಾಪಿಸದೇ, ರೈತರಿಗೆ ಜಮೀನು ವಾಪಸ್ ಕೊಡದೆ, ಹೆದ್ದಾರಿಯಲ್ಲಿ ಸಂಚರಿಸುವುದಕ್ಕೂ ಅವಕಾಶ ಕೊಡದ ಕಂಪನಿಯ ನಿಲುವು ಸರಿಯಲ್ಲ, ಇದನ್ನು ನೋಡಿಕೊಂಡು ಜಿಲ್ಲಾಡಳಿತ ಇಷ್ಟು ವರ್ಷ ಹೇಗೆ ಸುಮ್ಮನಿದೆ’ ಎಂದು ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.</p>.<p><strong>24 ಗಂಟೆ ಗಡುವು:</strong> ‘24 ಗಂಟೆಯೊಳಗೆ ರಾಜ್ಯ ಹೆದ್ದಾರಿಯನ್ನು ಜನರ ಸಂಚಾರಕ್ಕೆ ತೆರೆಯಬೇಕು. ಹೆದ್ದಾರಿಗೆ ಗೇಟು ಅಳವಡಿಸಿರುವ ಕಂಪನಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಸಂಸದರು, ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ ಅವರಿಗೆ ಸೂಚಿಸಿದ್ದರು. ಆದರೆ ಸಭೆ ನಡೆದು ನಾಲ್ಕು ತಿಂಗಳಾದರೂ ಹೆದ್ದಾರಿ ಜನರ ಬಳಕೆಗೆ ದೊರಕಿಲ್ಲ.</p>.<p>**<br />ಕೂಡಲೇ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗೆ ಸೂಚನೆ ನೀಡಲಾಗುವುದು. ಹೆದ್ದಾರಿಯನ್ನು ಮುಕ್ತಗೊಳಿಸಲಾಗುವುದು.<br /><em><strong>–ಡಾ.ವಿ.ರಾಮಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ತಾಲ್ಲೂಕಿನ ಹರಗಿನಡೋಣಿ– ಕುಡುತಿನಿಯ ನಡುವಿನ ದೂರ 7 ಕಿ.ಮೀ ಆದರೆ ಅಲ್ಲಿಗೆ ತಲುಪಲು ಗ್ರಾಮಸ್ಥರು 40 ಕಿ.ಮೀ ಸುತ್ತುಬಳಸಿ ಸಂಚರಿಸಬೇಕಾಗಿದೆ. ಮೂರು ವರ್ಷಗಳಿಂದಲೂ ಈ ಗ್ರಾಮಸ್ಥರು ಬಳ್ಳಾರಿ ಬಳಸಿಕೊಂಡು ಸಂಚರಿಸುತ್ತಿದ್ದಾರೆ.</p>.<p>ಕಾರಣ, ಉಕ್ಕು ಕಾರ್ಖಾನೆ ಸ್ಥಾಪಿಸುವುದಾಗಿ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ ಅರ್ಸೆಲರ್ ಮಿತ್ತಲ್ ಇಂಡಿಯಾ ಕಂಪನಿಯು 4,900 ಎಕರೆ ಜಮೀನನ್ನು 7 ವರ್ಷಗಳ ಹಿಂದೆಯೇ ಖರೀದಿಸಿತ್ತು. ಈ ಜಮೀನಿನ ಬಳಿಯೇ ರಾಜ್ಯ ಹೆದ್ದಾರಿ ಹಾದು ಹೋಗುತ್ತದೆ. ಮೂರು ವರ್ಷಗಳ ಹಿಂದೆ ತನ್ನ ಜಮೀನು ಸೇರಿಸಿ, ರಾಜ್ಯ ಹೆದ್ದಾರಿಗೇ ಗೇಟ್ ಹಾಕಿ ಸಂಚಾರವನ್ನು ಬಂದ್ ಮಾಡಿದೆ.</p>.<p>ಈವರೆಗೆ ಕಾರ್ಖಾನೆಯನ್ನೂ ಸ್ಥಾಪಿಸಿಲ್ಲ. ರಸ್ತೆಗೆ ಅಡ್ಡಲಾಗಿ ಹಾಕಿರುವ ಗೇಟ್ ಅನ್ನೂ ಸಂಚಾರಕ್ಕೆ ಮುಕ್ತಗೊಳಿಸಿಲ್ಲ. ಕುಡುತಿನಿ ಹಾಗೂ ಹರಗಿನಡೋಣಿ ಗ್ರಾಮದವರು ಒಳ ರಸ್ತೆಯಿಂದ ಹೋದರೂ 15 ಕಿ.ಮೀ ಬಳಸಿ ಪ್ರಯಾಣಿಸಲೇಬೇಕು.</p>.<p>‘ರಸ್ತೆಯನ್ನು ಸೇರಿಸಿ ಜಮೀನು ಖರೀದಿಸಿರುವುದರಿಂದ ನಿಮಗೆ ಇಲ್ಲಿ ಸಂಚರಿಸಲು ಅವಕಾಶವಿಲ್ಲ ಎಂದು ಭದ್ರತಾ ಸಿಬ್ಬಂದಿ ಹೇಳುತ್ತಾರೆ. ಪರ್ಯಾಯ ರಸ್ತೆ ಮಾಡಿಕೊಡುವುದಾಗಿ ಜಿಲ್ಲಾಡಳಿತ ನೀಡಿದ ಭರವಸೆಯೂ ಈಡೇರಿಲ್ಲ’ ಎಂದು ಗ್ರಾಮದ ದೊಡ್ಡನಗೌಡ ‘ಪ್ರಜಾವಾಣಿ’ಯೊಂದಿಗೆ ಅಸಹಾಯಕತೆ ತೋಡಿಕೊಂಡರು.</p>.<p>‘ವೇಣಿವೀರಾಪುರ ಮಾರ್ಗದ ಮೂಲಕ ಕುಡುತಿನಿಗೆ ಸಂಚರಿಸುವ ಖಾಸಗಿ ಬಸ್ ಬಿಟ್ಟರೆ ನಾವು, ಬಳ್ಳಾರಿಗೆ ಬಂದೇ ಕುಡುತಿನಿ, ಹೊಸಪೇಟೆ ಕಡೆಗೆ ತೆರಳಬೇಕಾಗಿದೆ. ನಮಗೇಕೆ ಈ ಕಷ್ಟ ಕೊಟ್ಟಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದರು.</p>.<p><strong>ಸಭೆಗೆ ನಾಲ್ಕು ತಿಂಗಳು:</strong> ಜನವರಿ 10ರಂದು ನಗರದಲ್ಲಿ ನಡೆದಿದ್ದ ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಹರಗಿನಡೋಣಿಯ ನಿವಾಸಿಗಳು ಈ ಸಮಸ್ಯೆಯ ಬಗ್ಗೆ ಸಂಸದ ವಿ.ಎಸ್.ಉಗ್ರಪ್ಪ ಅವರ ಗಮನ ಸೆಳೆದಿದ್ದರು.</p>.<p>‘ಜಮೀನಿನಲ್ಲಿ ಕೈಗಾರಿಕೆಯನ್ನೂ ಸ್ಥಾಪಿಸದೇ, ರೈತರಿಗೆ ಜಮೀನು ವಾಪಸ್ ಕೊಡದೆ, ಹೆದ್ದಾರಿಯಲ್ಲಿ ಸಂಚರಿಸುವುದಕ್ಕೂ ಅವಕಾಶ ಕೊಡದ ಕಂಪನಿಯ ನಿಲುವು ಸರಿಯಲ್ಲ, ಇದನ್ನು ನೋಡಿಕೊಂಡು ಜಿಲ್ಲಾಡಳಿತ ಇಷ್ಟು ವರ್ಷ ಹೇಗೆ ಸುಮ್ಮನಿದೆ’ ಎಂದು ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.</p>.<p><strong>24 ಗಂಟೆ ಗಡುವು:</strong> ‘24 ಗಂಟೆಯೊಳಗೆ ರಾಜ್ಯ ಹೆದ್ದಾರಿಯನ್ನು ಜನರ ಸಂಚಾರಕ್ಕೆ ತೆರೆಯಬೇಕು. ಹೆದ್ದಾರಿಗೆ ಗೇಟು ಅಳವಡಿಸಿರುವ ಕಂಪನಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಸಂಸದರು, ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ ಅವರಿಗೆ ಸೂಚಿಸಿದ್ದರು. ಆದರೆ ಸಭೆ ನಡೆದು ನಾಲ್ಕು ತಿಂಗಳಾದರೂ ಹೆದ್ದಾರಿ ಜನರ ಬಳಕೆಗೆ ದೊರಕಿಲ್ಲ.</p>.<p>**<br />ಕೂಡಲೇ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿಗೆ ಸೂಚನೆ ನೀಡಲಾಗುವುದು. ಹೆದ್ದಾರಿಯನ್ನು ಮುಕ್ತಗೊಳಿಸಲಾಗುವುದು.<br /><em><strong>–ಡಾ.ವಿ.ರಾಮಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>