ನೆರೆ, ಬರಪರಿಹಾರ, ನೀರಾವರಿಗೆ ಅನುದಾನ ಬಿಡುಗಡೆಯೂ ಸೇರಿದಂತೆ ರಾಜ್ಯಕ್ಕೆ ಬರಬೇಕಾದ ಅನುದಾನಗಳನ್ನು ನೀಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಗುರುವಾರ ತುಮಕೂರಿನ ರೈತ ಸಮಾವೇಶದಲ್ಲಿ ಮೋದಿ ಎದುರಲ್ಲೇ ಆಗ್ರಹಿಸಿದ್ದರು. ಆದರೆ ಮೋದಿ ಭಾಷಣದಲ್ಲಿ ಅನುದಾನ, ನೆರವಿನ ಕುರಿತು ಯಾವುದೇ ವಿಚಾರ ಪ್ರಸ್ತಾಪಿಸರಲಿಲ್ಲ.ಈ ಕುರಿತ ಮಾಧ್ಯಮ ವರದಿಗಳ ಸಂಬಂಧಶುಕ್ರವಾರ ಮಾಧ್ಯಮ ಹೇಳಿಕೆಗೆ ಬಿಡುಗಡೆ ಮಾಡಿರುವ ಸಿಎಂ ಬಿಎಸ್ವೈ, ‘ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳಿಗೆಪ್ರಧಾನಿ ಸ್ಪಂದಿಸಿದ್ದಾರೆ,’ ಎಂದು ಹೇಳಿದ್ದಾರೆ.