<p><strong>ಬೆಂಗಳೂರು:</strong>ಕಮ್ಯುನಿಸ್ಟ್ ಚಳವಳಿಯ ಸಂಗಾತಿಗಳ ಮಧ್ಯೆ ಕಾಮ್ರೇಡ್ ಎಂಸಿಎನ್ ಎಂದೇ ಚಿರಪರಿಚಿತರಾಗಿದ್ದ ಎಂ.ಸಿ. ನರಸಿಂಹನ್ ವಿದ್ಯಾರ್ಥಿ ದೆಸೆಯಿಂದಲೇ ಶೋಷಣೆಯ ವಿರುದ್ಧ ಹೋರಾಟ ನಡೆಸಿ ಸಮಾಜವಾದಿ ಸಮಾಜ ನಿರ್ಮಾಣದ ಕನಸು ಕಂಡವರು.</p>.<p>1942ರ ಸಂದರ್ಭದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅವರು ಎಂಜಿನಿಯರಿಂಗ್ ಶಿಕ್ಷಣವನ್ನು ಕೊನೆ ವರ್ಷದಲ್ಲಿ ಕೈಬಿಟ್ಟು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಪೂರ್ಣಾವಧಿ ಕಾರ್ಯಕರ್ತರಾಗಿ ಕೋಲಾರದ ಚಿನ್ನದ ಗಣಿ ಕಾರ್ಮಿಕರನ್ನು ಸಂಘಟಿಸಲು ಕೆಜಿಎಫ್ಗೆ ತೆರಳಿದರು.</p>.<p>ನಂತರ ಹಲವಾರು ಹೋರಾಟಗಳ ಮೂಲಕ ಕಾರ್ಮಿಕ ನಾಯಕರಾಗಿ ಬೆಳೆದ ಅವರು, 1957ರಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಕೆಜಿಎಫ್ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ಚುನಾಯಿತರಾದರು. 1962ರ ಚೀನಾ ಮಹಾಯುದ್ಧದ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ ಅವರು 1962ರಿಂದ 1967ರವರೆಗೂ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.</p>.<p>ಶಾಸನ ಸಭೆಗಳಲ್ಲಿ ದುಡಿಯುವ ಜನರ ಧ್ವನಿಯಾಗಿದ್ದ ಅವರು ರೈತ-ಕಾರ್ಮಿಕರ ಹಿತಾಸಕ್ತಿಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಿದ್ದರು.</p>.<p>ತದನಂತರ ಮದ್ರಾಸ್ ವಿಶ್ವವಿದ್ಯಾನಿಲಯದ ಕಾನೂನು ವಿದ್ಯಾರ್ಥಿಯಾಗಿ ಉನ್ನತ ಶ್ರೇಣಿಯಲ್ಲಿ ಕಾನೂನು ಪದವಿ ಪಡೆದ ಅವರು ರಾಜ್ಯದ ಸಮರ್ಥ ವಕೀಲರಾಗಿ ಕಾನೂನು ಸಮರದಲ್ಲಿ ಕಾರ್ಮಿಕ ವರ್ಗದ ಪರ ಕಾನೂನು ಹೋರಾಟ ನಡೆಸಿದರು.</p>.<p>ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿಯಾಗುವ ಅವಕಾಶವನ್ನು ಎರಡು ಬಾರಿ ವಿನಯವಾಗಿಯೇ ನಿರಾಕರಿಸಿದ್ದರು. ಕಳೆದ 2-3 ವರ್ಷಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗುವವರೆಗೂ ಕಾರ್ಮಿಕರ ಪರವಾದ ಕೇಸುಗಳನ್ನು ನಡೆಸಿದರು.</p>.<p>ಸಂವಿಧಾನದ ಪ್ರಬಲ ಸಮರ್ಥಕರಾಗಿ ಸಾಂವಿಧಾನಿಕ ಕಾನೂನಿನ ಉತ್ಕೃಷ್ಟ ಪಂಡಿತರಾಗಿ ಹಲವಾರು ಪ್ರಕರಣಗಳಲ್ಲಿ ಕಾರ್ಮಿಕರ ಪರ ಕಾನೂನು ರಚನೆಯಾಗಲು ನ್ಯಾಯಾಲಯಗಳಲ್ಲಿ ಶ್ರಮಿಸಿದ ಕೀರ್ತಿ ನರಸಿಂಹನ್ ಅವರಿಗೆ ಸಲ್ಲುತ್ತದೆ.</p>.<p>‘ರಾಜಪ್ಪ ವಿರುದ್ಧ ಬೆಂಗಳೂರು ಜಲಮಂಡಳಿ’ ಪ್ರಕರಣದಲ್ಲಿ ಕೈಗಾರಿಕೆಯ ವಿಸ್ತೃತ ವ್ಯಾಖ್ಯಾನ ನೀಡುವುದರೊಂದಿಗೆ ಎಲ್ಲ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ನ್ಯಾಯ ನೀಡಿಕೆಯಲ್ಲಿ ಒಂದು ಕ್ರಾಂತಿಕಾರಿಯಾದ ಚರಿತ್ರೆಯನ್ನೇ ನಿರ್ಮಿಸಿದ ಶ್ರೇಯಸ್ಸು ಅವರದ್ದು.</p>.<p>ಕನಿಷ್ಟ ಕೂಲಿ ವಿಷಯದಲ್ಲಿ ಆಳವಾದ ಅಧ್ಯಯನ ಮಾಡಿದ್ದ ಅವರು ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಬದುಕಿಗೆ ಬೆಳಕಾಗಿದ್ದರು. ಕಾರ್ಮಿಕ ಕಾನೂನಿನ ಕ್ಷೇತ್ರಕ್ಕೆ, ಕಾರ್ಮಿಕ ಚಳವಳಿಗೆ ಕಾಮ್ರೇಡ್ ಎಂ.ಸಿ.ಎನ್. ಅವರ ಕೊಡುಗೆ ಅನನ್ಯವಾದುದು.</p>.<p>ಕಾರ್ಮಿಕರ ಧ್ವನಿ ಕ್ಷೀಣವಾಗಿರುವ ಇಂದಿನ ದಿನಗಳಲ್ಲಿ ಎಂ.ಸಿ.ಎನ್ ಅವರಂತಹ ಕಾರ್ಮಿಕ ವರ್ಗದ ಪಕ್ಷಪಾತಿಯ ನಿಧನದಿಂದ ಕಾರ್ಮಿಕ ವರ್ಗ ಇನ್ನಷ್ಟು ಬಡವಾಗಿದೆ.</p>.<p><strong>ಲೇಖಕ:<em>ಎಐಟಿಯುಸಿಪ್ರಧಾನ ಕಾರ್ಯದರ್ಶಿ</em></strong></p>.<p class="rtecenter"><strong><em>***</em></strong></p>.<p><strong>ಇಂದು ಸಂಜೆ ನಿಧನ</strong><br /><b>ಬೆಂಗಳೂರು:</b>ಹೈಕೋರ್ಟ್ ನ ಹಿರಿಯ ವಕೀಲರೂ ಮಾಜಿ ಶಾಸಕರು ಹಾಗೂ ಎಐಟಿಯುಸಿ ರಾಜ್ಯ ಸಮಿತಿ ಪೋಷಕರಾಗಿದ್ದ ಕಾಮ್ರೇಡ್ ಎಂ.ಸಿ. ನರಸಿಂಹನ್ (98) ಅವರು ಬುಧವಾರ ಸಂಜೆ 5 ಗಂಟೆಗೆ ನಿಧನರಾದರು.</p>.<p>ಬಸವೇಶ್ವರ ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಮೂವರು ಪುತ್ರಿಯರಿದ್ದಾರೆ.</p>.<p>ರಾಜ್ಯದಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡರು ಮತ್ತು ಕಾರ್ಮಿಕ ನಾಯಕರೂ ಆಗಿದ್ದ ನರಸಿಂಹನ್ ಅವರು 1957ರಿಂದ 1962ರವರೆಗೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಸಿಪಿಐ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅಂತೆಯೇ, 1962ರಿಂದ 1967ರವರೆಗೆ ವಿಧಾನ ಸಭೆಯಿಂದ ಪರಿಷತ್ ಗೆ ಆಯ್ಕೆಯಾಗಿದ್ದರು.</p>.<p>ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ಸೇರಿದಂತೆ ದುಡಿಯುವ ವರ್ಗದ ಜನರ ಕಲ್ಯಾಣಕ್ಕೆ ಉಪಯೋಗವಾಗುವಂತಹ ಹಲವು ಕಾನೂನುಗಳು ರೂಪುಗೊಳ್ಳಲು ನರಸಿಂಹನ್ ಕಾರಣರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong>ಕಮ್ಯುನಿಸ್ಟ್ ಚಳವಳಿಯ ಸಂಗಾತಿಗಳ ಮಧ್ಯೆ ಕಾಮ್ರೇಡ್ ಎಂಸಿಎನ್ ಎಂದೇ ಚಿರಪರಿಚಿತರಾಗಿದ್ದ ಎಂ.ಸಿ. ನರಸಿಂಹನ್ ವಿದ್ಯಾರ್ಥಿ ದೆಸೆಯಿಂದಲೇ ಶೋಷಣೆಯ ವಿರುದ್ಧ ಹೋರಾಟ ನಡೆಸಿ ಸಮಾಜವಾದಿ ಸಮಾಜ ನಿರ್ಮಾಣದ ಕನಸು ಕಂಡವರು.</p>.<p>1942ರ ಸಂದರ್ಭದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಅವರು ಎಂಜಿನಿಯರಿಂಗ್ ಶಿಕ್ಷಣವನ್ನು ಕೊನೆ ವರ್ಷದಲ್ಲಿ ಕೈಬಿಟ್ಟು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ಪೂರ್ಣಾವಧಿ ಕಾರ್ಯಕರ್ತರಾಗಿ ಕೋಲಾರದ ಚಿನ್ನದ ಗಣಿ ಕಾರ್ಮಿಕರನ್ನು ಸಂಘಟಿಸಲು ಕೆಜಿಎಫ್ಗೆ ತೆರಳಿದರು.</p>.<p>ನಂತರ ಹಲವಾರು ಹೋರಾಟಗಳ ಮೂಲಕ ಕಾರ್ಮಿಕ ನಾಯಕರಾಗಿ ಬೆಳೆದ ಅವರು, 1957ರಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಕೆಜಿಎಫ್ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ಚುನಾಯಿತರಾದರು. 1962ರ ಚೀನಾ ಮಹಾಯುದ್ಧದ ಸಂದರ್ಭದಲ್ಲಿ ಜೈಲುವಾಸ ಅನುಭವಿಸಿದ ಅವರು 1962ರಿಂದ 1967ರವರೆಗೂ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.</p>.<p>ಶಾಸನ ಸಭೆಗಳಲ್ಲಿ ದುಡಿಯುವ ಜನರ ಧ್ವನಿಯಾಗಿದ್ದ ಅವರು ರೈತ-ಕಾರ್ಮಿಕರ ಹಿತಾಸಕ್ತಿಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಿದ್ದರು.</p>.<p>ತದನಂತರ ಮದ್ರಾಸ್ ವಿಶ್ವವಿದ್ಯಾನಿಲಯದ ಕಾನೂನು ವಿದ್ಯಾರ್ಥಿಯಾಗಿ ಉನ್ನತ ಶ್ರೇಣಿಯಲ್ಲಿ ಕಾನೂನು ಪದವಿ ಪಡೆದ ಅವರು ರಾಜ್ಯದ ಸಮರ್ಥ ವಕೀಲರಾಗಿ ಕಾನೂನು ಸಮರದಲ್ಲಿ ಕಾರ್ಮಿಕ ವರ್ಗದ ಪರ ಕಾನೂನು ಹೋರಾಟ ನಡೆಸಿದರು.</p>.<p>ರಾಜ್ಯ ಹೈಕೋರ್ಟ್ನ ನ್ಯಾಯಮೂರ್ತಿಯಾಗುವ ಅವಕಾಶವನ್ನು ಎರಡು ಬಾರಿ ವಿನಯವಾಗಿಯೇ ನಿರಾಕರಿಸಿದ್ದರು. ಕಳೆದ 2-3 ವರ್ಷಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗುವವರೆಗೂ ಕಾರ್ಮಿಕರ ಪರವಾದ ಕೇಸುಗಳನ್ನು ನಡೆಸಿದರು.</p>.<p>ಸಂವಿಧಾನದ ಪ್ರಬಲ ಸಮರ್ಥಕರಾಗಿ ಸಾಂವಿಧಾನಿಕ ಕಾನೂನಿನ ಉತ್ಕೃಷ್ಟ ಪಂಡಿತರಾಗಿ ಹಲವಾರು ಪ್ರಕರಣಗಳಲ್ಲಿ ಕಾರ್ಮಿಕರ ಪರ ಕಾನೂನು ರಚನೆಯಾಗಲು ನ್ಯಾಯಾಲಯಗಳಲ್ಲಿ ಶ್ರಮಿಸಿದ ಕೀರ್ತಿ ನರಸಿಂಹನ್ ಅವರಿಗೆ ಸಲ್ಲುತ್ತದೆ.</p>.<p>‘ರಾಜಪ್ಪ ವಿರುದ್ಧ ಬೆಂಗಳೂರು ಜಲಮಂಡಳಿ’ ಪ್ರಕರಣದಲ್ಲಿ ಕೈಗಾರಿಕೆಯ ವಿಸ್ತೃತ ವ್ಯಾಖ್ಯಾನ ನೀಡುವುದರೊಂದಿಗೆ ಎಲ್ಲ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ನ್ಯಾಯ ನೀಡಿಕೆಯಲ್ಲಿ ಒಂದು ಕ್ರಾಂತಿಕಾರಿಯಾದ ಚರಿತ್ರೆಯನ್ನೇ ನಿರ್ಮಿಸಿದ ಶ್ರೇಯಸ್ಸು ಅವರದ್ದು.</p>.<p>ಕನಿಷ್ಟ ಕೂಲಿ ವಿಷಯದಲ್ಲಿ ಆಳವಾದ ಅಧ್ಯಯನ ಮಾಡಿದ್ದ ಅವರು ರಾಷ್ಟ್ರ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಬದುಕಿಗೆ ಬೆಳಕಾಗಿದ್ದರು. ಕಾರ್ಮಿಕ ಕಾನೂನಿನ ಕ್ಷೇತ್ರಕ್ಕೆ, ಕಾರ್ಮಿಕ ಚಳವಳಿಗೆ ಕಾಮ್ರೇಡ್ ಎಂ.ಸಿ.ಎನ್. ಅವರ ಕೊಡುಗೆ ಅನನ್ಯವಾದುದು.</p>.<p>ಕಾರ್ಮಿಕರ ಧ್ವನಿ ಕ್ಷೀಣವಾಗಿರುವ ಇಂದಿನ ದಿನಗಳಲ್ಲಿ ಎಂ.ಸಿ.ಎನ್ ಅವರಂತಹ ಕಾರ್ಮಿಕ ವರ್ಗದ ಪಕ್ಷಪಾತಿಯ ನಿಧನದಿಂದ ಕಾರ್ಮಿಕ ವರ್ಗ ಇನ್ನಷ್ಟು ಬಡವಾಗಿದೆ.</p>.<p><strong>ಲೇಖಕ:<em>ಎಐಟಿಯುಸಿಪ್ರಧಾನ ಕಾರ್ಯದರ್ಶಿ</em></strong></p>.<p class="rtecenter"><strong><em>***</em></strong></p>.<p><strong>ಇಂದು ಸಂಜೆ ನಿಧನ</strong><br /><b>ಬೆಂಗಳೂರು:</b>ಹೈಕೋರ್ಟ್ ನ ಹಿರಿಯ ವಕೀಲರೂ ಮಾಜಿ ಶಾಸಕರು ಹಾಗೂ ಎಐಟಿಯುಸಿ ರಾಜ್ಯ ಸಮಿತಿ ಪೋಷಕರಾಗಿದ್ದ ಕಾಮ್ರೇಡ್ ಎಂ.ಸಿ. ನರಸಿಂಹನ್ (98) ಅವರು ಬುಧವಾರ ಸಂಜೆ 5 ಗಂಟೆಗೆ ನಿಧನರಾದರು.</p>.<p>ಬಸವೇಶ್ವರ ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಮೂವರು ಪುತ್ರಿಯರಿದ್ದಾರೆ.</p>.<p>ರಾಜ್ಯದಕಮ್ಯುನಿಸ್ಟ್ ಚಳವಳಿಯ ಹಿರಿಯ ಮುಖಂಡರು ಮತ್ತು ಕಾರ್ಮಿಕ ನಾಯಕರೂ ಆಗಿದ್ದ ನರಸಿಂಹನ್ ಅವರು 1957ರಿಂದ 1962ರವರೆಗೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಸಿಪಿಐ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಅಂತೆಯೇ, 1962ರಿಂದ 1967ರವರೆಗೆ ವಿಧಾನ ಸಭೆಯಿಂದ ಪರಿಷತ್ ಗೆ ಆಯ್ಕೆಯಾಗಿದ್ದರು.</p>.<p>ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ಸೇರಿದಂತೆ ದುಡಿಯುವ ವರ್ಗದ ಜನರ ಕಲ್ಯಾಣಕ್ಕೆ ಉಪಯೋಗವಾಗುವಂತಹ ಹಲವು ಕಾನೂನುಗಳು ರೂಪುಗೊಳ್ಳಲು ನರಸಿಂಹನ್ ಕಾರಣರಾಗಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>