ಹೊಸಪೇಟೆ ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಚಾರ ಬಂದ್ ಮಾಡಿದ್ದರಿಂದ, ಬೆಂಗಳೂರು, ಚಿತ್ರದುರ್ಗ, ದಾವಣಗೆರೆ, ಮಂಗಳೂರು, ವಿಜಯಪುರ, ಬಾಗಲ
ಕೋಟೆ, ಪುಣೆ, ಮುಂಬೈಗೆ ಹೋಗುವವರು ಪರದಾಡಿದರು. ಹೆದ್ದಾರಿಯ ಒಂದು ಬದಿಯಲ್ಲಿ ಶಾಮಿಯಾನ ಹಾಕಿ ಹಸಿರು ಧ್ವಜಗಳೊಂದಿಗೆ ರೈತರು ಧರಣಿ ಕುಳಿತರು. ಧರಣಿ ನಿರತರಿಗೆ ಹೆದ್ದಾರಿ ಬದಿಯಲ್ಲೇ ಆಹಾರ ಸಿದ್ಧಪಡಿಸಿ ವಿತರಿಸಲಾಯಿತು.