ಮಳೆಗಾಲದಲ್ಲಿ ಬೆಟ್ಟದಿಂದ ಹರಿದು ಬರುವ ನೀರು, ಕೆಳಭಾಗದಲ್ಲಿರುವ ತೋಟದ ಅಂಚಿಗೆ ಬೃಹತ್ ಪ್ರಮಾಣದಲ್ಲಿ ಹರಿಯುತ್ತದೆ. ಚಿರೆಕಲ್ಲು ತೆಗೆಯುವಾಗ ಈ ಸುರಂಗಪತ್ತೆಯಾಯಿತು. ಹೊಂಡದೊಳಕ್ಕೆ ಇಳಿದರೆ ಎರಡೂ ದಿಕ್ಕಿಗೆ ಸುಮಾರು 12 ಅಡಿ ದೂರ ಮಾತ್ರ ಹೋಗಬಹುದು. ಇನ್ನೂ ಮುಂದೆ ಹೋದರೆ ತಲೆಗೆ ಕಲ್ಲು ಬಂಡೆ ತಗಲುತ್ತದೆ. ಇದರ ಮೇಲ್ಪದರ ಪೂರ್ತಿ ಬಂಡೆಯಿಂದ ಆವೃತವಾಗಿದೆ. ಹಾಗಾಗಿ ಮಣ್ಣು ಮೆತ್ತಗಾಗಿ ಸುಲಭದಲ್ಲಿ ಕುಸಿಯುವ ಸಾಧ್ಯತೆ ಕಡಿಮೆಯಿದೆ.