ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಬೆಂಗಳೂರಿನಲ್ಲಿದ್ದೇನೆ. ನನ್ನ ಮಗ ಬೇರೆ ಕಡೆ ವಾಸವಾಗಿದ್ದಾನೆ. ನಾನು ಬಿಜೆಪಿ ಪಕ್ಷದ ಸಂಸದ. ನಾನು ಬಿಜೆಪಿಯ ನಿಷ್ಠಾವಂತ ವ್ಯಕ್ತಿ. ಆದ್ದರಿಂದ ನಾನು ಶರತ್ ಪರ ಮತ ಕೇಳುವುದಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಈ ಬಗ್ಗೆ ಮಾತಾಡೋಣ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.