ಸಂಘಟಕರು ಆಹ್ವಾನ ನೀಡಿದ ವೀರಶೈವ, ಲಿಂಗಾಯತ ಮಠಾಧೀಶರಲ್ಲಿ ಬಹುತೇಕರು ಭಾಗವಹಿಸಲಿಲ್ಲ. ಭಾಲ್ಕಿ ಹಿರೇಮಠದ ಕಿರಿಯ ಸ್ವಾಮೀಜಿ ಒಲ್ಲದ ಮನಸ್ಸಿನಿಂದ ಭಾಗವಹಿಸಿದ್ದು ಎದ್ದು ಕಾಣುತ್ತಿತ್ತು. ಲಿಂಗಾಯತ, ವೀರಶೈವ ಸಂಘಟನೆಗಳೂ ಬೆಂಬಲ ವ್ಯಕ್ತಪಡಿಸಲಿಲ್ಲ. ಇದು ಆರ್ಎಸ್ಎಸ್, ಬಿಜೆಪಿಗೆ ದೊಡ್ಡ ಹೊಡೆತವಾಗಿದೆ. ಬಿಜೆಪಿ ಮುಖಂಡರು ಎಂಟು ದಿನ ಪ್ರಯತ್ನ ನಡೆಸಿದರೂ ರ್ಯಾಲಿಗೆ ಯಶಸ್ವಿಯಾಗಲಿಲ್ಲ ಎಂದು ಟೀಕಿಸಿದ್ದಾರೆ.