ಕೂಡ್ಲಿಗಿ: ಶ್ರೀಶೈಲದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೀಪ ನಂದಿದೆ. ಅದ್ದರಿಂದ ತಮ್ಮ ತಮ್ಮ ಮನೆಗಳ ಬಾಗಿಲ ಮುಂದೆ ನಾಲ್ಕು ದೀಪಗಳನ್ನು ಹಚ್ಚಿ ಇಡಬೇಕು ಎಂಬ ವದಂತಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ತಾಲ್ಲೂಕುಗಳಲ್ಲಿ ಹರಡಿದೆ.
ಇದರಿಂದ ಮಹಿಳೆಯರು ಮನೆಯ ಮುಂದೆ ಕಸ ಗೂಡಿಸಿ, ಸೆಗಣಿ ಸಾರಿಸಿ, ರಂಗೋಲೊ ಹಾಕಿ ವೀಳ್ಯದೆಲೆ ಅಥವಾ ಎಕ್ಕೆ ಎಲೆ ಇಟ್ಟು ನಾಲ್ಕು ದೀಪಗಳನ್ನು ಹಚ್ಚುತಿರುವುದು ಕಂಡು ಬಂದಿದೆ.