ಇದಕ್ಕೆ ಪ್ರತಿಕ್ರಿಯಿಸಿದ ಪರಾಜಿತ ಅಭ್ಯರ್ಥಿ, ಬಿಜೆಪಿಯ ಎ.ಮಂಜು, ‘ಮೊಮ್ಮಗನಿಗೆ ತಾತ ಕ್ಷೇತ್ರ ತ್ಯಾಗ ಮಾಡುವುದು, ತಾತನಿಗೆ ಮೊಮ್ಮಗ ಕ್ಷೇತ್ರ ತ್ಯಾಗ ಮಾಡುವುದು ಹಾಸ್ಯಾಸ್ಪದ. ಪ್ರಚಾರಕ್ಕಾಗಿ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ ಅಷ್ಟೇ. ಪ್ರಜ್ವಲ್ಗೆ ತಪ್ಪಿನ ಅರಿವಾಗಿದೆ. ಮೊದಲೇ ದೇವೇಗೌಡರಿಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರೆ ಸೋಲುತ್ತಿರಲಿಲ್ಲ’ ಎಂದು ಹೇಳಿದರು.