<p><strong>ಮೈಸೂರು:</strong> ದೇವಸ್ಥಾನಗಳಲ್ಲಿ ಭಕ್ತರಿಗೆ ನೀಡುವ ಪ್ರಸಾದ ತಯಾರಿಕೆಗೆ ಮಾನದಂಡ ನಿಗದಿಗೊಳಿಸಬೇಕು ಎಂಬ ಆಹಾರ ಸಂರಕ್ಷಣಾ ಹಾಗೂ ಗುಣಮಟ್ಟ ನಿಯಂತ್ರಣ ಪ್ರಾಧಿಕಾರದ ಪ್ರಸ್ತಾವಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಪ್ರಾಧಿಕಾರದ ಸಿಇಒ ಪವನ್ ಕುಮಾರ್ ಅಗರವಾಲ್ ತಿಳಿಸಿದರು.</p>.<p>‘ಆರಂಭದಲ್ಲಿ ಈ ಕುರಿತು ವಿರೋಧ ವ್ಯಕ್ತವಾಗಿತ್ತು. ಈ ವಿಚಾರದಲ್ಲಿ ಅವಸರ ಮಾಡಲಾಗದು. ಏಕೆಂದರೆ, ಇಲ್ಲಿ ಧರ್ಮ ಹಾಗೂ ಭಕ್ತಿಯ ವಿಚಾರ ಅಡಗಿದೆ. ತಂತ್ರಜ್ಞಾನದ ಅಳವಡಿಕೆ ದೊಡ್ಡ ವಿಚಾರವಲ್ಲ. ಆದರೆ, ಧಾರ್ಮಿಕ ಭಾವನೆಗಳಿಗೆ ತೊಡಕಾಗದಂತೆ ಮುತುವರ್ಜಿ ವಹಿಸುವುದಕ್ಕೆ ಗಮನ ನೀಡಬೇಕಿದೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ತಿರುಪತಿ ದೇವಸ್ಥಾನದಿಂದ ವಿರೋಧವಿತ್ತು. ಈಗ ಅವರೂ ನಮಗೆ ಸಹಮತ ವ್ಯಕ್ತಪಡಿಸಿದ್ದಾರೆ. ನಮ್ಮ ತಂಡವು ದೇವಸ್ಥಾನ ಆಡಳಿತ ಮಂಡಳಿಗಳ ಜತೆ ನಿರಂತರ ಮಾತುಕತೆಯಲ್ಲಿ ತೊಡಗಿದೆ. ಪ್ರಸಾದ ತಯಾರಿಯಲ್ಲಿ ಗುಣಮಟ್ಟ ಮಾನದಂಡ ಪಾಲಿಸುವಂತೆ ಮನವರಿಕೆ ಮಾಡಿದೆ. ಪ್ರಸಾದ ತಯಾರಿಗೆ ನೂರಾರು ವರ್ಷಗಳ ಇತಿಹಾಸವಿದೆ; ಅದಕ್ಕೆ ಯಾರೂ ಮೂಗು ತೂರಿಸಬಾರದು ಎಂಬ ಧಾರ್ಮಿಕ ಸಂಸ್ಥೆಗಳ ನಿಲುವಿಗೆ ನಾವು ಬದ್ಧರಾಗಿದ್ದೇವೆ. ನಾವು ಮಧ್ಯ ಪ್ರವೇಶ ಮಾಡುವುದಿಲ್ಲ. ಬದಲಿಗೆ, ಧಾರ್ಮಿಕ ಸಂಸ್ಥೆಗಳೇ ಗುಣಮಟ್ಟ ಪರೀಕ್ಷಿಸಿ ಭಕ್ತರಿಗೆ ನೀಡುವಂತೆ ಕೋರಿಕೆ ಸಲ್ಲಿಸಿದ್ದೇವೆ’ ಎಂದು ಹೇಳಿದರು.</p>.<p class="Briefhead"><strong>ಕರ್ನಾಟಕ ಶ್ಲಾಘನೀಯ:</strong></p>.<p>ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸುವಲ್ಲಿ ಕರ್ನಾಟಕವು ಮುತುವರ್ಜಿ ವಹಿಸಿದೆ. ಯಾವುದೇಲೋಪಗಳಾಗದಂತೆ ಎಚ್ಚರವಹಿಸಿದೆ ಎಂದು ಶ್ಲಾಘಿಸಿದರು.</p>.<p>‘ಬಿಸಿಯೂಟ ಯೋಜನೆ ಜಾರಿಯಾದ ಸಮಯದಲ್ಲೇ ಕೇಂದ್ರ ಸರ್ಕಾರವು ಹಲವು ಗುಣಮಟ್ಟ ಮಾನದಂಡಗಳನ್ನು ಸಿದ್ಧಪಡಿಸಿತ್ತು. ಶಾಲೆಗಳ ಆಡಳಿತ ಮಂಡಳಿಗಳು ಅವನ್ನು ಸೂಕ್ತವಾಗಿ ಪಾಲಿಸಬೇಕು. ಈ ಶಾಲೆಗಳಲ್ಲಿ ಈ ಮಾನದಂಡಗಳ ಪಾಲನೆಯಾಗುತ್ತಿರುವ ಕುರಿತು ನಿಗಾ ಇಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕುರಿತು ನಾವು ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದ್ದೇವೆ’ ಎಂದರು.</p>.<p class="Briefhead"><strong>ಆಹಾರ ರಕ್ಷಣಾ ಅಧಿಕಾರಿಗಳ ನೇಮಕವಾಗಲಿ:</strong></p>.<p>ದೇಶದಲ್ಲಿ ಆಹಾರ ಸಂರಕ್ಷಣಾ ನಿಯಮಗಳ ಪಾಲನೆಯಾಗಬೇಕಾದರೆ ಆಹಾರ ರಕ್ಷಣಾ ಅಧಿಕಾರಿಗಳ ನೇಮಕವಾಗಬೇಕು ಎಂದು ಅಭಿಪ್ರಾಯಪಟ್ಟರು.</p>.<p>ದೇಶದಲ್ಲಿ ಸುಮಾರು 824 ಅಧಿಕಾರಿಗಳ ಕೊರತೆ ಇದೆ. ಕೆಲವು ರಾಜ್ಯಗಳಲ್ಲಿ ಆಹಾರ ರಕ್ಷಣಾ ಅಧಿಕಾರಿಗಳು ಕಡಿಮೆಯಿದ್ದಾರೆ. ಕೆಲವೆಡೆ ಉತ್ತಮ ಸಂಖ್ಯೆಯಲ್ಲಿದ್ದಾರೆ. ತಮಿಳುನಾಡಿನಲ್ಲಂತೂ ಅಗತ್ಯಕ್ಕಿಂತ ಅಧಿಕಾರಿಗಳಿದ್ದಾರೆ ಎಂದು ಉದಾಹರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ದೇವಸ್ಥಾನಗಳಲ್ಲಿ ಭಕ್ತರಿಗೆ ನೀಡುವ ಪ್ರಸಾದ ತಯಾರಿಕೆಗೆ ಮಾನದಂಡ ನಿಗದಿಗೊಳಿಸಬೇಕು ಎಂಬ ಆಹಾರ ಸಂರಕ್ಷಣಾ ಹಾಗೂ ಗುಣಮಟ್ಟ ನಿಯಂತ್ರಣ ಪ್ರಾಧಿಕಾರದ ಪ್ರಸ್ತಾವಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಪ್ರಾಧಿಕಾರದ ಸಿಇಒ ಪವನ್ ಕುಮಾರ್ ಅಗರವಾಲ್ ತಿಳಿಸಿದರು.</p>.<p>‘ಆರಂಭದಲ್ಲಿ ಈ ಕುರಿತು ವಿರೋಧ ವ್ಯಕ್ತವಾಗಿತ್ತು. ಈ ವಿಚಾರದಲ್ಲಿ ಅವಸರ ಮಾಡಲಾಗದು. ಏಕೆಂದರೆ, ಇಲ್ಲಿ ಧರ್ಮ ಹಾಗೂ ಭಕ್ತಿಯ ವಿಚಾರ ಅಡಗಿದೆ. ತಂತ್ರಜ್ಞಾನದ ಅಳವಡಿಕೆ ದೊಡ್ಡ ವಿಚಾರವಲ್ಲ. ಆದರೆ, ಧಾರ್ಮಿಕ ಭಾವನೆಗಳಿಗೆ ತೊಡಕಾಗದಂತೆ ಮುತುವರ್ಜಿ ವಹಿಸುವುದಕ್ಕೆ ಗಮನ ನೀಡಬೇಕಿದೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ತಿರುಪತಿ ದೇವಸ್ಥಾನದಿಂದ ವಿರೋಧವಿತ್ತು. ಈಗ ಅವರೂ ನಮಗೆ ಸಹಮತ ವ್ಯಕ್ತಪಡಿಸಿದ್ದಾರೆ. ನಮ್ಮ ತಂಡವು ದೇವಸ್ಥಾನ ಆಡಳಿತ ಮಂಡಳಿಗಳ ಜತೆ ನಿರಂತರ ಮಾತುಕತೆಯಲ್ಲಿ ತೊಡಗಿದೆ. ಪ್ರಸಾದ ತಯಾರಿಯಲ್ಲಿ ಗುಣಮಟ್ಟ ಮಾನದಂಡ ಪಾಲಿಸುವಂತೆ ಮನವರಿಕೆ ಮಾಡಿದೆ. ಪ್ರಸಾದ ತಯಾರಿಗೆ ನೂರಾರು ವರ್ಷಗಳ ಇತಿಹಾಸವಿದೆ; ಅದಕ್ಕೆ ಯಾರೂ ಮೂಗು ತೂರಿಸಬಾರದು ಎಂಬ ಧಾರ್ಮಿಕ ಸಂಸ್ಥೆಗಳ ನಿಲುವಿಗೆ ನಾವು ಬದ್ಧರಾಗಿದ್ದೇವೆ. ನಾವು ಮಧ್ಯ ಪ್ರವೇಶ ಮಾಡುವುದಿಲ್ಲ. ಬದಲಿಗೆ, ಧಾರ್ಮಿಕ ಸಂಸ್ಥೆಗಳೇ ಗುಣಮಟ್ಟ ಪರೀಕ್ಷಿಸಿ ಭಕ್ತರಿಗೆ ನೀಡುವಂತೆ ಕೋರಿಕೆ ಸಲ್ಲಿಸಿದ್ದೇವೆ’ ಎಂದು ಹೇಳಿದರು.</p>.<p class="Briefhead"><strong>ಕರ್ನಾಟಕ ಶ್ಲಾಘನೀಯ:</strong></p>.<p>ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೊಳಿಸುವಲ್ಲಿ ಕರ್ನಾಟಕವು ಮುತುವರ್ಜಿ ವಹಿಸಿದೆ. ಯಾವುದೇಲೋಪಗಳಾಗದಂತೆ ಎಚ್ಚರವಹಿಸಿದೆ ಎಂದು ಶ್ಲಾಘಿಸಿದರು.</p>.<p>‘ಬಿಸಿಯೂಟ ಯೋಜನೆ ಜಾರಿಯಾದ ಸಮಯದಲ್ಲೇ ಕೇಂದ್ರ ಸರ್ಕಾರವು ಹಲವು ಗುಣಮಟ್ಟ ಮಾನದಂಡಗಳನ್ನು ಸಿದ್ಧಪಡಿಸಿತ್ತು. ಶಾಲೆಗಳ ಆಡಳಿತ ಮಂಡಳಿಗಳು ಅವನ್ನು ಸೂಕ್ತವಾಗಿ ಪಾಲಿಸಬೇಕು. ಈ ಶಾಲೆಗಳಲ್ಲಿ ಈ ಮಾನದಂಡಗಳ ಪಾಲನೆಯಾಗುತ್ತಿರುವ ಕುರಿತು ನಿಗಾ ಇಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಕುರಿತು ನಾವು ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದ್ದೇವೆ’ ಎಂದರು.</p>.<p class="Briefhead"><strong>ಆಹಾರ ರಕ್ಷಣಾ ಅಧಿಕಾರಿಗಳ ನೇಮಕವಾಗಲಿ:</strong></p>.<p>ದೇಶದಲ್ಲಿ ಆಹಾರ ಸಂರಕ್ಷಣಾ ನಿಯಮಗಳ ಪಾಲನೆಯಾಗಬೇಕಾದರೆ ಆಹಾರ ರಕ್ಷಣಾ ಅಧಿಕಾರಿಗಳ ನೇಮಕವಾಗಬೇಕು ಎಂದು ಅಭಿಪ್ರಾಯಪಟ್ಟರು.</p>.<p>ದೇಶದಲ್ಲಿ ಸುಮಾರು 824 ಅಧಿಕಾರಿಗಳ ಕೊರತೆ ಇದೆ. ಕೆಲವು ರಾಜ್ಯಗಳಲ್ಲಿ ಆಹಾರ ರಕ್ಷಣಾ ಅಧಿಕಾರಿಗಳು ಕಡಿಮೆಯಿದ್ದಾರೆ. ಕೆಲವೆಡೆ ಉತ್ತಮ ಸಂಖ್ಯೆಯಲ್ಲಿದ್ದಾರೆ. ತಮಿಳುನಾಡಿನಲ್ಲಂತೂ ಅಗತ್ಯಕ್ಕಿಂತ ಅಧಿಕಾರಿಗಳಿದ್ದಾರೆ ಎಂದು ಉದಾಹರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>