ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆರಿಗೆ ವೇಳೆ ಮಹಿಳೆ ಸಾವು: ಸಂಬಂಧಿಕರ ಪ್ರತಿಭಟನೆ

Last Updated 6 ಮೇ 2019, 5:57 IST
ಅಕ್ಷರ ಗಾತ್ರ

ರಾಮನಗರ: ಚನ್ನಪಟ್ಟಣದ ಬಾಲು ನರ್ಸಿಂಗ್ ಹೋಮ್‌ನಲ್ಲಿ ಸೋಮವಾರ ಹೆರಿಗೆ ವೇಳೆ ದೀಕ್ಷಿತಾ (19) ಎಂಬ ಮಹಿಳೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯ ಖಂಡಿಸಿ ಆಕೆಯ ಸಂಬಂಧಿಕರು ಆಸ್ಪತ್ರೆಯಲ್ಲಿ ದಾಂದಲೆ ನಡೆಸಿದರು.

ತಾಲ್ಲೂಕಿನ ಮಳೂರುಪಟ್ಟಣ ಗ್ರಾಮದವರಾದ ದೀಕ್ಷಿತಾ ಹೆರಿಗೆ ಸಲುವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ಸಂದರ್ಭ ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿಯೇ ಸಾವನ್ನಪ್ಪಿದರು. ಇದರಿಂದ ಆತಂಕಗೊಂಡ ವೈದ್ಯೆ ಶೈಲಜಾ ಹಾಗೂ ಸಿಬ್ಬಂದಿ‌ ಶವವನ್ನು ಅಲ್ಲಿಯೇ ಬಿಟ್ಟು ಆಸ್ಪತ್ರೆಯಿಂದ ಕಾಲ್ಕಿತ್ತರು. ಇದರಿಂದ ಆಕ್ರೋಶಗೊಂಡ ದೀಕ್ಷಿತಾ ಸಂಬಂಧಿಕರು ಆಸ್ಪತ್ರೆಯ ಗಾಜು ಪುಡಿಪುಡಿ ಮಾಡಿ, ಪೀಠೋಪಕರಣ ಧ್ವಂಸಗೊಳಿಸಿ ಕಟ್ಟಡದ ಮುಂಭಾಗ ಪ್ರತಿಭಟನೆ ನಡೆಸಿದರು.

ದೀಕ್ಷಿತಾಗೆ ಗಂಡು ಮಗು ಜನಿಸಿದ್ದು, ಅದಾದ ಅರ್ಧ ಗಂಟೆಯಲ್ಲಿ‌ ತಾಯಿ‌ ಸಾವನ್ನಪ್ಪಿದರು. ಸದ್ಯ‌ ಮಗು ಆರೋಗ್ಯದಿಂದ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ದೀಕ್ಷಿತಾಗೆ ಜನಿಸಿರುವ ಗಂಡು ಮಗು
ದೀಕ್ಷಿತಾಗೆ ಜನಿಸಿರುವ ಗಂಡು ಮಗು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT