ಬೆಂಗಳೂರು: ಪ್ರಥಮ ಪಿಯು ಪೂರಕ ಪರೀಕ್ಷೆಗಳನ್ನು ಸಮರ್ಪಕವಾಗಿ ನಿಭಾಯಿಸಲು ಇದೇ 13ರಿಂದ ಎಲ್ಲ ಉಪನ್ಯಾಸಕರೂ ತಮ್ಮ ಕಾಲೇಜಿಗೆ ತೆರಳಬೇಕು ಎಂದು ಸೂಚಿಸಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
‘ಈ ಸಮಯದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರಲು ಹೇಳಿ ತರಗತಿ ತೆಗೆದುಕೊಳ್ಳಬಾರದು. ಆದರೆ ಆನ್ಲೈನ್ ತರಗತಿಗಳನ್ನು ನಡೆಸಿ ಅವರ ಕಲಿಕೆಗೆ ಉತ್ತೇಜನ ನೀಡಬಹುದು’ ಎಂಬ ಸೂಚನೆ ನೀಡಲಾಗಿದೆ.
ವರ್ಗಾವಣೆಗೆ ನಿಯಮ ರೂಪಿಸಿ: ಪದವಿಪೂರ್ವ ಕಾಲೇಜು ಉಪನ್ಯಾಸಕರ ವರ್ಗಾವಣೆಗೆ ಸರ್ಕಾರ ವೈಜ್ಞಾನಿಕ ನಿಯಮ ರೂಪಿಸಬೇಕು ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ಅವರು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.