ಕ್ಷೌರಿಕ ವೃತ್ತಿಯೊಂದಿಗೆ ರಾಚಪ್ಪ ಅವರು ಲೋಹಿಯಾ, ಶಾಂತವೇರಿ ಗೋಪಾಲಗೌಡ ಅವರ ಸಂಪರ್ಕ ಪಡೆದು ಸಮಾಜವಾದಿ ಹೋರಾಟಕ್ಕೆ ಧುಮುಕಿದರು. ತಾಲ್ಲೂಕಿನ ಹೆಬ್ಬಳ್ಳಿಯಲ್ಲಿ ನಡೆದ ಕರ್ನಾಟಕದ 2ನೇ ಭೂ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಸಮಾಜವಾದ ಹೋರಾಟವನ್ನು ಪರಿಗಣಿಸಿ ರಾಜ್ಯ ಸರ್ಕಾರವು 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.