ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಇಲಾಖೆಯನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ದೂರುವ ಅಗತ್ಯವಿಲ್ಲ. ಮೊದಲು ದೂರದರ್ಶನ ವಾಹಿನಿ ಒಂದೇ ಇತ್ತು. ಖಾಸಗೀಕರಣಕ್ಕೆ ಅವಕಾಶ ಕೊಟ್ಟ ಬಳಿಕ ಹಲವು ಖಾಸಗಿ ವಾಹಿನಿಗಳು ಬಂದವು. ಉದ್ಯೋಗಾವಕಾಶ ಹಾಗೂ ಆರ್ಥಿಕತೆ ಹೆಚ್ಚಿತು. ರೈಲ್ವೆ ವಿಷಯದಲ್ಲೂ ಹಾಗೆಯೇ’ ಎಂದು ಸಮರ್ಥಿಸಿಕೊಂಡರು.