<p><strong>ಗೋಕರ್ಣ:</strong> ಒಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಸಮೀಪದ ಗಂಗಾವಳಿ ನದಿಯು ಅಪಾಯದ ಮಟ್ಟ ಮೀರಿ ಹರಿದು, ಪ್ರವಾಹ ಪರಿಸ್ಥಿತಿ ಉಂಟು ಮಾಡಿತ್ತು. ಹೀಗೆ ನದಿಯಿಂದ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದು ಸ್ಥಳೀಯರೊಬ್ಬರ ಮನೆಯ ಬಳಿ ಕಾಣಿಸಿಕೊಂಡ ಮೊಸಳೆಯೊಂದನ್ನು ಕಂಡು ಇದೀಗ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.</p>.<p>ಗೋಕರ್ಣದ ನಾಡುಮಾಸ್ಕೇರಿ ಗ್ರಾಮದ ಶಿವು ಗೌಡ ಎಂಬುವವರ ಮನೆಯ ಬಳಿ ಮೊಸಳೆ ಬಂದಿದ್ದು, ಇದು ಮನೆಯವರಲ್ಲಿ ಭಯದ ವಾತಾವರಣ ಉಂಟು ಮಾಡಿತು.</p>.<p><strong>ಇದನ್ನೂ ಓದಿ...<a href="https://www.prajavani.net/stories/stateregional/special-package-flood-affected-657691.html" target="_blank">ತೀರ್ಥಹಳ್ಳಿ | ಪ್ರವಾಹ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್, ಮುಖ್ಯಮಂತ್ರಿ ಭರವಸೆ</a></strong></p>.<p>ಗಂಗಾವಳಿ ನದಿ ತೀರವು ಅರಣ್ಯ ಪ್ರದೇಶದಿಂದ ಕೂಡಿದ್ದು, ಇದು ವನ್ಯಜೀವಿಗಳ ವಾಸಸ್ಥಾನವಾಗಿದೆ. ಇದೀಗ ಪ್ರವಾಹದಿಂದ ಎಲ್ಲವೂ ಊರಿನತ್ತ ಕೊಚ್ಚಿಕೊಂಡು ಬಂದಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ.</p>.<p>ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಉರಗತಜ್ಞ ಪವನ ನಾಯ್ಕ ಹಾಗೂ ಅಶೋಕ ನಾಯ್ಕ ತದಡಿ, ಸ್ಥಳೀಯರ ಸಹಕಾರದಿಂದ ಮೊಸಳೆಯನ್ನ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.</p>.<p>'ಪ್ರವಾಹದಿಂದಾಗಿ ಹಾವು, ಮೊಸಳೆ ಸೇರಿದಂತೆ ಇನ್ನಿತರ ವನ್ಯಜೀವಿಗಳು ಗ್ರಾಮಗಳತ್ತ ಬಂದಿರುವುದು ಸದ್ಯ ಸಾಮಾನ್ಯವಾಗಿರಲಿದೆ. ಹೀಗೆ ಯಾವುದೇ ವನ್ಯಜೀವಿಗಳು ಕಾಣಿಸಿಕೊಂಡಲ್ಲಿ ಭಯಗೊಳ್ಳದೆ, ತಕ್ಷಣ ನಮಗೆ ಕರೆ ಮಾಡಿ. ಸಂತ್ರಸ್ತರಿಗಾಗಿ ಯಾವುದೇ ಸಮಯದಲ್ಲೂ ನಾವು ಈ ವನ್ಯಜೀವಿಗಳನ್ನು ಸೆರೆ ಹಿಡಿದು, ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕಾರ್ಯಕ್ಕೆ ತಯಾರಿದ್ದೇವೆ' ಎಂದು ಪವನ್ ಹಾಗೂ ಅಶೋಕ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ:</strong> ಒಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಸಮೀಪದ ಗಂಗಾವಳಿ ನದಿಯು ಅಪಾಯದ ಮಟ್ಟ ಮೀರಿ ಹರಿದು, ಪ್ರವಾಹ ಪರಿಸ್ಥಿತಿ ಉಂಟು ಮಾಡಿತ್ತು. ಹೀಗೆ ನದಿಯಿಂದ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದು ಸ್ಥಳೀಯರೊಬ್ಬರ ಮನೆಯ ಬಳಿ ಕಾಣಿಸಿಕೊಂಡ ಮೊಸಳೆಯೊಂದನ್ನು ಕಂಡು ಇದೀಗ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.</p>.<p>ಗೋಕರ್ಣದ ನಾಡುಮಾಸ್ಕೇರಿ ಗ್ರಾಮದ ಶಿವು ಗೌಡ ಎಂಬುವವರ ಮನೆಯ ಬಳಿ ಮೊಸಳೆ ಬಂದಿದ್ದು, ಇದು ಮನೆಯವರಲ್ಲಿ ಭಯದ ವಾತಾವರಣ ಉಂಟು ಮಾಡಿತು.</p>.<p><strong>ಇದನ್ನೂ ಓದಿ...<a href="https://www.prajavani.net/stories/stateregional/special-package-flood-affected-657691.html" target="_blank">ತೀರ್ಥಹಳ್ಳಿ | ಪ್ರವಾಹ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್, ಮುಖ್ಯಮಂತ್ರಿ ಭರವಸೆ</a></strong></p>.<p>ಗಂಗಾವಳಿ ನದಿ ತೀರವು ಅರಣ್ಯ ಪ್ರದೇಶದಿಂದ ಕೂಡಿದ್ದು, ಇದು ವನ್ಯಜೀವಿಗಳ ವಾಸಸ್ಥಾನವಾಗಿದೆ. ಇದೀಗ ಪ್ರವಾಹದಿಂದ ಎಲ್ಲವೂ ಊರಿನತ್ತ ಕೊಚ್ಚಿಕೊಂಡು ಬಂದಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ.</p>.<p>ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಉರಗತಜ್ಞ ಪವನ ನಾಯ್ಕ ಹಾಗೂ ಅಶೋಕ ನಾಯ್ಕ ತದಡಿ, ಸ್ಥಳೀಯರ ಸಹಕಾರದಿಂದ ಮೊಸಳೆಯನ್ನ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.</p>.<p>'ಪ್ರವಾಹದಿಂದಾಗಿ ಹಾವು, ಮೊಸಳೆ ಸೇರಿದಂತೆ ಇನ್ನಿತರ ವನ್ಯಜೀವಿಗಳು ಗ್ರಾಮಗಳತ್ತ ಬಂದಿರುವುದು ಸದ್ಯ ಸಾಮಾನ್ಯವಾಗಿರಲಿದೆ. ಹೀಗೆ ಯಾವುದೇ ವನ್ಯಜೀವಿಗಳು ಕಾಣಿಸಿಕೊಂಡಲ್ಲಿ ಭಯಗೊಳ್ಳದೆ, ತಕ್ಷಣ ನಮಗೆ ಕರೆ ಮಾಡಿ. ಸಂತ್ರಸ್ತರಿಗಾಗಿ ಯಾವುದೇ ಸಮಯದಲ್ಲೂ ನಾವು ಈ ವನ್ಯಜೀವಿಗಳನ್ನು ಸೆರೆ ಹಿಡಿದು, ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕಾರ್ಯಕ್ಕೆ ತಯಾರಿದ್ದೇವೆ' ಎಂದು ಪವನ್ ಹಾಗೂ ಅಶೋಕ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>