'ಪ್ರವಾಹದಿಂದಾಗಿ ಹಾವು, ಮೊಸಳೆ ಸೇರಿದಂತೆ ಇನ್ನಿತರ ವನ್ಯಜೀವಿಗಳು ಗ್ರಾಮಗಳತ್ತ ಬಂದಿರುವುದು ಸದ್ಯ ಸಾಮಾನ್ಯವಾಗಿರಲಿದೆ. ಹೀಗೆ ಯಾವುದೇ ವನ್ಯಜೀವಿಗಳು ಕಾಣಿಸಿಕೊಂಡಲ್ಲಿ ಭಯಗೊಳ್ಳದೆ, ತಕ್ಷಣ ನಮಗೆ ಕರೆ ಮಾಡಿ. ಸಂತ್ರಸ್ತರಿಗಾಗಿ ಯಾವುದೇ ಸಮಯದಲ್ಲೂ ನಾವು ಈ ವನ್ಯಜೀವಿಗಳನ್ನು ಸೆರೆ ಹಿಡಿದು, ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕಾರ್ಯಕ್ಕೆ ತಯಾರಿದ್ದೇವೆ' ಎಂದು ಪವನ್ ಹಾಗೂ ಅಶೋಕ ಹೇಳಿದರು.