ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಗುರುವಾರ ಸಂಜೆ ಮಳೆಯ ಸಿಂಚನವಾಗಿದೆ. ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣವಿತ್ತು. ಸಂಜೆ ವೇಳೆ ಕಕ್ಕಬ್ಬೆ ವ್ಯಾಪ್ತಿಯ ಮರಂದೋಡು, ಪೊದ್ದುಮಾನಿ, ಕೋಕೇರಿ ಸುತ್ತಮುತ್ತ ಮಳೆ ಸುರಿದಿದೆ.
ಈ ಸಮಯದಲ್ಲಿ ಜೋರು ಮಳೆಯಾದರೆ ಮಾತ್ರ ಕಾಫಿ ಬೆಳೆಗೆ ಅನುಕೂಲ. ಸಾಧಾರಣ ಮಳೆ ಸುರಿದು ಹೋದರೆ ಮುಂದಿನ ವರ್ಷದ ಕಾಫಿ ಫಸಲಿನ ಮೇಲೆ ಪರಿಣಾಮ ಬೀರಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.