ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪಡಿತರ ವಿತರಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್

Last Updated 7 ಏಪ್ರಿಲ್ 2020, 15:45 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್-19ರ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮಂಗಳವಾರ ಜೆ.ಸಿ ನಗರದಲ್ಲಿ ಬಡವರಿಗೆ ದಿನಸಿ ಆಹಾರ ಪದಾರ್ಥಗಳನ್ನು ವಿತರಿಸಿದರು.

ಅಕ್ಕಿ, ಬೇಳೆ, ಎಣ್ಣೆ ಮತ್ತು ಸಾಂಬಾರು ಪದಾರ್ಥಗಳನ್ನು ಒಳಗೊಂಡ 19 ಕೆ.ಜಿ ತೂಕದ 500 ಕಿಟ್‌ಗಳನ್ನು ವಿತರಿಸಲಾಯಿತು.
‘ಬುಧವಾರ ಮತ್ತು ಗುರುವಾರವೂ ನಗರದ ವಿವಿಧೆಡೆ ಕೊಳಗೇರಿ ನಿವಾಸಿಗಳಿಗೆ ಅಗತ್ಯ ದಿನಸಿ ಪದಾರ್ಥ ವಿತರಣೆ ಮಾಡಲಾಗುವುದು’ ಎಂದು ದೀಕ್ಷಿತ್ ಅವರು ತಿಳಿಸಿದರು.

ವಿತರಣೆ ವೇಳೆ ಕೃಷ್ಣ ದೀಕ್ಷಿತ್ ಅವರ ಪತ್ನಿ ಯೋಗಿನಿ ದೀಕ್ಷಿತ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅವರ ಪತ್ನಿ ನಾಝಿಹಾ ರಿಜ್ವಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT