ಅದಿರು ಸಾಗಣೆಗೆ ಅನುಕೂಲವಾಗುವಂತೆ ಸುರಂಗ ಮಾರ್ಗ ನಿರ್ಮಾಣ, ಸಂವಹನ ಸೌಲಭ್ಯ ಒದಗಿಸಿರುವ ಸರ್ಕಾರ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಿದೆ. ಭಾರಿ ಸಂಖ್ಯೆಯಲ್ಲಿ ಜನರೂ ಈ ಪ್ರದೇಶದತ್ತ ಬರುತ್ತಿದ್ದಾರೆ. ಕೆಲವರು ಉದ್ಯೋಗ ಅರಸಿ ಇಲ್ಲಿಗೆ ಬಂದಿದ್ದರೆ, ಇನ್ನೂ ಕೆಲವರು ಹೋಟೆಲ್ ಹಾಗೂ ಇತರ ವ್ಯವಹಾರ ಆರಂಭಿಸಿದ್ದಾರೆ.