ಜೆಡಿಎಸ್ ನೀಡಿರುವ ದೂರಿನಲ್ಲಿ, ‘ಮಣ್ಣಿನ ಮಕ್ಕಳ ಕಣ್ಣೀರು ಪಕ್ಷದ ಪ್ರಣಾಳಿಕೆ, ನಿಮ್ಮ ಓಟು ನಮ್ಮ ಸೀಟು’ ಹೀಗೆ ಹಲವು ರೀತಿಯ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಪೋಸ್ಟ್ಗಳನ್ನುಹಾಕಲಾಗುತ್ತಿದೆ. ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಮುಖಂಡರ ವಿರುದ್ಧ ಅವಹೇಳನಕಾರಿ ಪೋಸ್ಟ್ಗಳನ್ನು ಹಾಕುತ್ತಾ, ಉಪಚುನಾವಣೆಯಲ್ಲಿ ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಇದು ಚುನಾವಣಾ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸೂಕ್ತ ಕ್ರಮ ಜರುಗಿಸಿ ಸಂಬಂಧಿಸಿದರಿಗೆ ನಿರ್ದೇಶನ ನೀಡಬೇಕೆಂದುಕೇಳಿಕೊಳ್ಳುತ್ತೇವೆ ಎಂದು ಉಲ್ಲೇಖಿಸಲಾಗಿದೆ.