‘ಕೇಂದ್ರ ಸರ್ಕಾರವು ಗೋವಾದ ಭಾವನಾತ್ಮಕ ರಾಜಕಾರಣಕ್ಕೆ ಮಣೆ ಹಾಕದೇ ವಿವಾದವನ್ನು ಶಾಶ್ವತವಾಗಿ ಬಗೆಹರಿಸಬೇಕು. ಮಹದಾಯಿ ವ್ಯಾಪ್ತಿಯ ಇಬ್ಬರು ಕೇಂದ್ರ ಸಚಿವರು ಸೇರಿದಂತೆ ನಾಲ್ವರು ಸಂಸದರು, ಕಳಸಾ-ಬಂಡೂರಿ ಕಾಮಗಾರಿಗಳ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು. ಅಧ್ಯಯನಕ್ಕೆ ರಚಿಸಿರುವ ಉಪ ಸಮಿತಿ ರದ್ದುಪಡಿಸಬೇಕು. ಈಗ ಸಿಕ್ಕಿರುವ ಅನುಮತಿ ರದ್ದಾಗದಂತೆ ನೋಡಿಕೊಳ್ಳಬೇಕು. ಗೋವಾ ತಗಾದೆಯಿಂದ ಕಾಮಗಾರಿಗಳಿಗೆ ಮತ್ತೆ ಹಿನ್ನಡೆಯಾದರೆ, ಈ ಭಾಗದ ಸಂಸದರ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.