ಬೆಂಗಳೂರು: ನಗರದಲ್ಲಿ ಸೋಮವಾರ ನಸುಕಿನಲ್ಲಿ ನಿಧನರಾದಕೇಂದ್ರ ಸಚಿವ ಅನಂತಕುಮಾರ್ ಅವರಸದ್ಗುಣಗಳನ್ನುರಾಜ್ಯದ ಹಿರಿಯ ರಾಜಕಾರಿಣಿಗಳು ಪಕ್ಷಭೇದ ಮರೆತು ನೆನಪಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಸಂತಾಪ ಸೂಚಿಸಿದ್ದಾರೆ.
‘ಅನಂತಕುಮಾರ್ ನಿಧನದಿಂದ ನನಗೆ ನೋವಾಗಿದೆ. ಜನಪರ ಮತ್ತು ಮೌಲ್ಯಾಧಾರಿತ ರಾಜಕಾರಣ ಮಾಡುತ್ತಿದ್ದ ಅನಂತಕುಮಾರ್ ಸಂಸದರಾಗಿ ಮತ್ತು ಕೇಂದ್ರ ಸಚಿವರಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ವೈಯಕ್ತಿಕವಾಗಿ ನಾನು ಒಬ್ಬ ಉತ್ತಮ ಗೆಳೆಯನನ್ನು ಕಳೆದುಕೊಂಡಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ.
Deeply pained to hear about the untimely death of Uni.Minister and a dear friend #Ananthakumar.
— CM of Karnataka (@CMofKarnataka) November 12, 2018
A value-based politician, a pro people leader, who made a significant contribution to the country as an MP &Uni.Minister. I have lost a great friend.
May his soul rest in peace pic.twitter.com/FBRicd64M2
‘ಉತ್ತಮ ವಾಗ್ಮಿಯೂ ಆಗಿದ್ದ ಅನಂತಕುಮಾರ್ ನಮ್ಮ ತಲೆಮಾರಿನ ಚತುರ ರಾಜಕಾರಿಣಿ. ಜ್ಞಾನ, ಅನುಭವ ಮತ್ತು ಹಾಸ್ಯಪ್ರಜ್ಞೆ ಅವರಲ್ಲಿ ಮೇಳೈಸಿತ್ತು’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಟ್ವಿಟ್ ಮಾಡಿದ್ದಾರೆ.
Extremely sad to hear the news of the demise of Shri H.N.#AnanthKumar. He was without doubt one of the towering political talents of his generation – a sharp debater, who used knowledge, experience and wit to wonderful effect. I express my condolences to his family and colleagues pic.twitter.com/dSXtAsbXyX
— Dr. G Parameshwara (@DrParameshwara) November 12, 2018
‘ಉತ್ತಮ ಸಂಸದೀಯ ಪಟು, ಕೇಂದ್ರಸಚಿವ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ಶ್ರೀ ಅನಂತಕುಮಾರ್ ಅವರ ನಿಧನ ತೀವ್ರ ಆಘಾತಕಾರಿಯಾದ ವಿಷಯ. ಅವರ ನಿಧನದಿಂದ ದೇಶದ ರಾಜಕಾರಣಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಕುಟುಂಬಕ್ಕೆ ಬಂಧು ಬಳಗದವರಿಗೆ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ, ಮೃತರ ಆತ್ಮಕ್ಕೆ ಶಾಂತಿ ದೊರಕಲಿ’ ಎಂದು ಕರ್ನಾಟಕ ಕಾಂಗ್ರೆಸ್ ಟ್ವಿಟ್ ಮಾಡಿದೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ‘ಘನತೆಯಿಂದ ರಾಜಕಾರಣ ನಿಭಾಯಿಸಿದ ಧೀಮಂತ ನಾಯಕನನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Sad to hear the news of shri @AnanthKumar_BJP’s demise. A stalwart of BJP from Karnataka who had a stupendous career at the national level from a very young age.
— Dinesh Gundu Rao (@dineshgrao) November 12, 2018
Always did his politics with decency and decorum.
We are going to miss him.
My condolences to his family.
ಪಕ್ಷಸಂಘಟನೆಯಲ್ಲಿ ಹೆಗಲೆಣೆಯಾಗಿದ್ದ ಅನಂತಕುಮಾರ್ ಅವರನ್ನು ನೆನೆದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ‘ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಉತ್ತಮ ಸಲಹೆಗಳನ್ನು ನೀಡಿ ಪಕ್ಷದ ಬೆಳವಣಿಗೆಗೆ ಕಾರಣವಾಗಿದ್ದ ಇವರ ಕೊಡುಗೆಗಳನ್ನು ಎಂದಿಗೂ ಮರೆಯಲಾಗದು’ಎಂದು ಟ್ವಿಟ್ ಮಾಡಿದ್ದಾರೆ.
ಅನಂತಕುಮಾರ್ ಅವರ ನಿಧನವು ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ಆದ ಭಾರೀ ನಷ್ಟ. ಒಬ್ಬ ಉತ್ತಮ ರಾಜಕಾರಣಿಯನ್ನು ಕಳೆದುಕೊಂಡು ರಾಜ್ಯ ಹಾಗೂ ದೇಶ ಬಡವಾಗಿದೆ. ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಉತ್ತಮ ಸಲಹೆಗಳನ್ನು ನೀಡಿ ಪಕ್ಷದ ಬೆಳವಣಿಗೆಗೆ ಕಾರಣವಾಗಿದ್ದ ಇವರ ಕೊಡುಗೆಗಳನ್ನು ಎಂದಿಗೂ ಮರೆಯಲಾಗದು. ದೇವರು ಇವರ ಆತ್ಮಕ್ಕೆ ಶಾಂತಿ ನೀಡಲಿ. pic.twitter.com/tNwezOKzzu
— B.S. Yeddyurappa (@BSYBJP) November 12, 2018
ಅನಂತ್ಕುಮಾರ್ ಅವರ ಆತ್ಮೀಯರೂ ಆಗಿದ್ದ ಶಾಸಕ ಸುರೇಶ್ಕುಮಾರ್, ‘ಜಯನಗರದ ನಮ್ಮವಿಜಯಕುಮಾರ್ ಅವರನ್ನು ಕಳೆದುಕೊಂಡ ಕೆಲವೇ ತಿಂಗಳುಗಳಲ್ಲಿ ನಾವು ನಮ್ಮ ಅನಂತಕುಮಾರರನ್ನೂ ಕಳೆದುಕೊಂಡಿದ್ದೇವೆ. ಉತ್ತಮ ರಾಜಕೀಯ ಇನ್ನಷ್ಟು ಬಡವಾಗಿದೆ.’ ಎಂದು ಟ್ವಿಟ್ ಮಾಡಿದ್ದಾರೆ. ‘ಆಪ್ತ ಗೆಳೆಯನ ಅಗಲಿಕೆ ಆಘಾತ ತಂದಿದೆ. ಅನಂತ್ ಇಲ್ಲದ ಬಿಜೆಪಿಯನ್ನು ಊಹಿಸಲಿಕ್ಕೂ ಆಗುವುದಿಲ್ಲ’ಎಂದು ಹೇಳಿದ್ದಾರೆ.
ನನ್ನ 32 ವರ್ಷದ ರಾಜಕೀಯ ಕ್ಷೇತ್ರದಲ್ಲಿನ ಗೆಳೆಯ ಅನಂತ ಕುಮಾರ್ ಇನ್ನಿಲ್ಲ ಎಂದು ಇದೀಗ ತಿಳಿದು ಈ ಬೆಳಗ್ಗಿನ ಜಾವ ತೀವ್ರ ಆಘಾತವಾಗಿದೆ. ಅನಂತ್ ಇಲ್ಲದ ಬಿಜೆಪಿಯನ್ನು ಊಹಿಸಲಿಕ್ಕೂ ಆಗುವುದಿಲ್ಲ. pic.twitter.com/IjfI20mGRR
— Sureshkumar (@nimmasuresh) November 12, 2018
‘ದೇಶದಾದ್ಯಂತ ಬಿಜೆಪಿ ಸಂಘಟನೆ ಬಲಪಡಿಸಲು ಶ್ರಮಿಸಿದವರು ನನ್ನ ಗುರು ಅನಂತಕುಮಾರ್’ ಎಂದು ಸಂಸದೆ ಶೋಭಾ ಕರಂದ್ಲಾಜೆ ನೆನಪಿಸಿಕೊಂಡಿದ್ದಾರೆ.
Extremely shocked & saddened by the untimely demise of veteran bjp leader, Union Minister & Our Mentor Shri #AnanthKumar. He worked tirelessly to strengthen the BJP all over the country
— Shobha Karandlaje (@ShobhaBJP) November 12, 2018
May his soul rest in peace and God give strength to bear his loss to his family...#OmShanthi pic.twitter.com/pKwfwe9FBm
***
ಪ್ರತಾಪಾ... ಪಾಸ್ಪೋರ್ಟ್ ಸೇವಾ ಕೇಂದ್ರ ಅಪ್ರೂವ್ ಮಾಡ್ಸಿದೀನಿ, ಮೈಸೂರು-ಬೆಂಗಳೂರು ಹೈವೇನ ಮೋದಿಜಿ ನಾಳೆ ಮಹಾರಾಜಾ ಗ್ರೌಂಡ್ ನಲ್ಲಿ ಘೋಷಣೆ ಮಾಡ್ತಾರೆ, ಏರ್ಪೋರ್ಟ್ಗೆ ಮರುಜೀವ ಕೊಡೋದಕ್ಕೆ ಜಯಂತ್ ಸಿನ್ಹಾಗೆ ಸೂಚಿಸಿದ್ದೇನೆ ಅಂತ ಸದಾ ಸಿಹಿ ಸುದ್ದಿ ಕೊಡುತ್ತಿದ್ದ ಆ ಧ್ವನಿಯನ್ನೇ ಕಿತ್ತುಕೊಂಡಲ್ಲಾ ದೇವರೇ.. pic.twitter.com/Wfsdpda1kY
— Pratap Simha (@mepratap) November 12, 2018
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.