ಈ ವೇಳೆ ಪ್ರತಿಕ್ರಿಯಿಸಿದ ಸುಮಲತಾ, ‘ರಾಜಕೀಯಕ್ಕೆ ಬರುವ ಆಲೋಚನೆ ಎಂದಿಗೂ ಇರಲಿಲ್ಲ. ಹಾಗೊಂದು ವೇಳೆ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದರೆ ಮಂಡ್ಯ ಕ್ಷೇತ್ರದಿಂದ ಮಾತ್ರ. ಅಭಿಮಾನಿಗಳೇ ನನ್ನ ಶಕ್ತಿ. ಪತಿ ಅಂಬರೀಷ್ ಅವರು ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದರು. ನನಗೂ ಕಾಂಗ್ರೆಸ್ ಪಕ್ಷವೇ ಪರಿಚಯ. ಕಾಂಗ್ರೆಸ್ನ ನಾಯಕರ ಜತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ’ ಎಂದು ಹೇಳುವ ಮೂಲಕ ಸ್ಪರ್ಧೆಯ ಇಂಗಿತವನ್ನು ವ್ಯಕ್ತಪಡಿಸಿದರು.