‘ಸರ್ಕಾರದ ಆದೇಶ ಬಂದ ಕಾರಣ 14ರ ಪದಗ್ರಹಣ ಕಾರ್ಯಕ್ರಮ ರದ್ದುಪಡಿಸಲು 7,800 ಪಂಚಾಯಿತಿ ಮಟ್ಟಕ್ಕೆ ಸಂದೇಶ ರವಾನಿಸಲಾಗಿದೆ. ಮತ್ತೆ ಕಾರ್ಯಕ್ರಮ ಸಜ್ಜುಗೊಳಿಸುವುದಕ್ಕೆ ಒಂದಿಷ್ಟು ಸಮಯ ಬೇಕು. ಸಿದ್ಧತೆ ತಕ್ಷಣದಿಂದ ಪುನರಾರಂಭಗೊಳ್ಳಲಿದ್ದು, ಪಕ್ಷದ ಹಿರಿಯ ನಾಯಕರೊಂದಿಗೆ ಚರ್ಚಿಸಿ ದಿನಾಂಕವನ್ನು ಶೀಘ್ರ ಪ್ರಕಟಿಸಲಿದ್ದೇನೆ’ಎಂದು ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.