<p><strong>ಮಂಗಳೂರು:</strong> ‘ಮಗಳು ಶಿಫಾನಿ (14 ವರ್ಷ) ಒಂಬತ್ತನೇ ತರಗತಿ. ಮಗ ಶಬೀಲ್ (9 ವರ್ಷ) ಐದನೇ ತರಗತಿ. ಇಬ್ಬರನ್ನೂ ಓದಿಸಿ, ದೇಶದ ಉತ್ತಮ ಪೌರರಾಗಿ ರೂಪಿಸುವ ಕನಸು ಅವರದ್ದಾಗಿತ್ತು. ಅದಕ್ಕಾಗಿ ಬಡತನದಲ್ಲೂ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಿದ್ದರು...’</p>.<p>ಪೌರತ್ವ (ತಿದ್ದುಪಡಿ) ಕಾಯ್ದೆಯ ಹೋರಾಟದ ಸಂದರ್ಭದಲ್ಲಿಪೊಲೀಸರ ಗುಂಡಿಗೆ ಬಲಿಯಾದ ಬಂದರಿನ ಕಂದಕ್ನ ಅಬ್ದುಲ್ ಜಲೀಲ್ ಮನೆಯವರು ಹೇಳುವಾಗ ದುಃಖ ಕಟ್ಟೆಯೊಡೆದಿತ್ತು.</p>.<p>‘ಮೀನು ಮಾರಾಟ ಮಾಡುತ್ತಿದ್ದ ಜಲೀಲ್, ಬಾಡಿಗೆಮನೆಯಲ್ಲಿ ವಾಸವಿದ್ದರು. ಅಂದೂ (ಗುರುವಾರ) ಹೊರಗಿನ ಗದ್ದಲ ಕಂಡ ಅವರು, ಮಕ್ಕಳನ್ನು ಮನೆಗೆ ಕಳುಹಿಸಿ ಹೊರಗೆ ಬರುತ್ತಿದ್ದರು. ಪೊಲೀಸರು...’ ಎಂದು ಅಕ್ಕನ ಮಗ ನಜೀರ್ ಹೇಳುತ್ತಿದ್ದಂತೆ ಕಣ್ಣಾಲಿಗಳು ತುಂಬಿದವು.</p>.<p>‘ದಿನದಲ್ಲಿ ₹100 ಸಂಪಾದಿಸಿದರೆ, ₹ 50 ಮಕ್ಕಳ ಶಿಕ್ಷಣಕ್ಕೆ, ₹40 ಮನೆಗೆ ಹಾಗೂ ₹10 ಮಾತ್ರ ತನಗೆ ಎಂಬ ದಿನಚರಿ ಅವರದ್ದು. ಈಗ ಕುಟುಂಬದ ಆಧಾರವೇ ಕಳಚಿ ಬಿದ್ದಿದೆ?’ ಎಂದು ಅಣ್ಣಂದಿರು ಗದ್ಗದಿತರಾದರು.</p>.<p>‘ಎರಡನೇ ಮಹಡಿಯಲ್ಲಿದ್ದ ಪತ್ನಿ, ಮಕ್ಕಳ ಕಣ್ಣೆದುರೇ ಅವರ ಮೇಲೆ ಗುಂಡು ಹಾರಿಸಿದರು. ಎಲ್ಲವನ್ನೂ ದೇವರು ನೋಡುತ್ತಾನೆ’ ಎಂದು ಅಣ್ಣ ಬಶೀರ್ ಮೌನವಾದರು.</p>.<p class="Subhead"><strong>ಅಮ್ಮನ ನೋವನ್ನು ಅಲ್ಲಾ ನೋಡುತ್ತಿದ್ದಾರೆ...:</strong> ‘ಅಂದು ಮಧ್ಯಾಹ್ನವೂ ಮನೆಗೆ ಬಂದಿದ್ದ ನೌಸೀನ್, ಮತ್ತೆ ಬರುವುದಿಲ್ಲ ಎಂಬ ಕನಸೂ ಇರಲಿಲ್ಲ. ಅಮ್ಮನ ನೋವನ್ನು ಅಲ್ಲಾ ನೋಡುತ್ತಿದ್ದಾರೆ. ಎಲ್ಲವನ್ನೂ ನಿರ್ಧರಿಸುತ್ತಾರೆ’ ಎಂದು ಕುದ್ರೋಳಿಯ ನೌಸೀನ್ ಸಹೋದರ ನೌಫಲ್ ಕಣ್ಣೀರಾದರು.</p>.<p>‘ಆತ ಕಲಿಕೆ, ಇತರ ಚಟುವಟಿಕೆಗಳಲ್ಲಿ ಚುರುಕಾಗಿ ಇರಲಿಲ್ಲ. ಆದ್ದರಿಂದಲೇ ಕೆಲಸ ಬಿಟ್ಟು ಬಂದರಿನಲ್ಲಿ ವೆಲ್ಡಿಂಗ್ಗೆ ಸೇರಿದ್ದ. ಬಂದರು ಪ್ರದೇಶದಲ್ಲಿ ಗಲಾಟೆಯನ್ನು ಕಂಡ ಆತನ ಮಾಲೀಕರು, ಮನೆಗೆ ತೆರಳುವಂತೆ ತಿಳಿಸಿದ್ದರು. ಅದರಿಂದಾಗಿಬೇಗ ಹೊರಟಿದ್ದ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ‘ಮಗಳು ಶಿಫಾನಿ (14 ವರ್ಷ) ಒಂಬತ್ತನೇ ತರಗತಿ. ಮಗ ಶಬೀಲ್ (9 ವರ್ಷ) ಐದನೇ ತರಗತಿ. ಇಬ್ಬರನ್ನೂ ಓದಿಸಿ, ದೇಶದ ಉತ್ತಮ ಪೌರರಾಗಿ ರೂಪಿಸುವ ಕನಸು ಅವರದ್ದಾಗಿತ್ತು. ಅದಕ್ಕಾಗಿ ಬಡತನದಲ್ಲೂ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಿದ್ದರು...’</p>.<p>ಪೌರತ್ವ (ತಿದ್ದುಪಡಿ) ಕಾಯ್ದೆಯ ಹೋರಾಟದ ಸಂದರ್ಭದಲ್ಲಿಪೊಲೀಸರ ಗುಂಡಿಗೆ ಬಲಿಯಾದ ಬಂದರಿನ ಕಂದಕ್ನ ಅಬ್ದುಲ್ ಜಲೀಲ್ ಮನೆಯವರು ಹೇಳುವಾಗ ದುಃಖ ಕಟ್ಟೆಯೊಡೆದಿತ್ತು.</p>.<p>‘ಮೀನು ಮಾರಾಟ ಮಾಡುತ್ತಿದ್ದ ಜಲೀಲ್, ಬಾಡಿಗೆಮನೆಯಲ್ಲಿ ವಾಸವಿದ್ದರು. ಅಂದೂ (ಗುರುವಾರ) ಹೊರಗಿನ ಗದ್ದಲ ಕಂಡ ಅವರು, ಮಕ್ಕಳನ್ನು ಮನೆಗೆ ಕಳುಹಿಸಿ ಹೊರಗೆ ಬರುತ್ತಿದ್ದರು. ಪೊಲೀಸರು...’ ಎಂದು ಅಕ್ಕನ ಮಗ ನಜೀರ್ ಹೇಳುತ್ತಿದ್ದಂತೆ ಕಣ್ಣಾಲಿಗಳು ತುಂಬಿದವು.</p>.<p>‘ದಿನದಲ್ಲಿ ₹100 ಸಂಪಾದಿಸಿದರೆ, ₹ 50 ಮಕ್ಕಳ ಶಿಕ್ಷಣಕ್ಕೆ, ₹40 ಮನೆಗೆ ಹಾಗೂ ₹10 ಮಾತ್ರ ತನಗೆ ಎಂಬ ದಿನಚರಿ ಅವರದ್ದು. ಈಗ ಕುಟುಂಬದ ಆಧಾರವೇ ಕಳಚಿ ಬಿದ್ದಿದೆ?’ ಎಂದು ಅಣ್ಣಂದಿರು ಗದ್ಗದಿತರಾದರು.</p>.<p>‘ಎರಡನೇ ಮಹಡಿಯಲ್ಲಿದ್ದ ಪತ್ನಿ, ಮಕ್ಕಳ ಕಣ್ಣೆದುರೇ ಅವರ ಮೇಲೆ ಗುಂಡು ಹಾರಿಸಿದರು. ಎಲ್ಲವನ್ನೂ ದೇವರು ನೋಡುತ್ತಾನೆ’ ಎಂದು ಅಣ್ಣ ಬಶೀರ್ ಮೌನವಾದರು.</p>.<p class="Subhead"><strong>ಅಮ್ಮನ ನೋವನ್ನು ಅಲ್ಲಾ ನೋಡುತ್ತಿದ್ದಾರೆ...:</strong> ‘ಅಂದು ಮಧ್ಯಾಹ್ನವೂ ಮನೆಗೆ ಬಂದಿದ್ದ ನೌಸೀನ್, ಮತ್ತೆ ಬರುವುದಿಲ್ಲ ಎಂಬ ಕನಸೂ ಇರಲಿಲ್ಲ. ಅಮ್ಮನ ನೋವನ್ನು ಅಲ್ಲಾ ನೋಡುತ್ತಿದ್ದಾರೆ. ಎಲ್ಲವನ್ನೂ ನಿರ್ಧರಿಸುತ್ತಾರೆ’ ಎಂದು ಕುದ್ರೋಳಿಯ ನೌಸೀನ್ ಸಹೋದರ ನೌಫಲ್ ಕಣ್ಣೀರಾದರು.</p>.<p>‘ಆತ ಕಲಿಕೆ, ಇತರ ಚಟುವಟಿಕೆಗಳಲ್ಲಿ ಚುರುಕಾಗಿ ಇರಲಿಲ್ಲ. ಆದ್ದರಿಂದಲೇ ಕೆಲಸ ಬಿಟ್ಟು ಬಂದರಿನಲ್ಲಿ ವೆಲ್ಡಿಂಗ್ಗೆ ಸೇರಿದ್ದ. ಬಂದರು ಪ್ರದೇಶದಲ್ಲಿ ಗಲಾಟೆಯನ್ನು ಕಂಡ ಆತನ ಮಾಲೀಕರು, ಮನೆಗೆ ತೆರಳುವಂತೆ ತಿಳಿಸಿದ್ದರು. ಅದರಿಂದಾಗಿಬೇಗ ಹೊರಟಿದ್ದ’ ಎಂದು ಅವರು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>