ಹಲವು ದಿನಗಳಿಂದ ನಿರ್ಬಂಧಗಳನ್ನು ವಿಧಿಸಲಾಗಿದೆ. ಹೀಗಾಗಿ, ಅವರ ಬಳಿ ಬೀಸುಕಲ್ಲು ಮೊದಲಾದವುಗಳನ್ನು ಖರೀದಿಸುವವರಿಲ್ಲ. ಇದರಿಂದಾಗಿ ಅವರಿಗೆ ವರಮಾನವೇ ಇಲ್ಲದಂತಾಗಿದೆ. ಜೊತೆಗೆ, ಅಂಗಡಿಗಳನ್ನು ಬಂದ್ ಮಾಡಿಸಿರುವುದರಿಂದ ದಿನಸಿ ಪದಾರ್ಥಗಳನ್ನು ತರುವುದಕ್ಕೂ ಅವರಿಗೆ ಸಾಧ್ಯವಾಗಿಲ್ಲ. ಪರಿಣಾಮ, ಊಟ ಹಾಗೂ ಉಪಾಹಾರಕ್ಕೂ ತತ್ವಾರ ಉಂಟಾಗಿರುವುದರಿಂದ ಅವರು ಕಂಗಾಲಾಗಿದ್ದಾರೆ.