<p><strong>ಬೆಂಗಳೂರು: </strong>53 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಡೆಲಿವರಿ ಬಾಯ್ ಆನಂದ್ ಎಂಬುವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಅವರಿಂದ ₹ 5,300 ದಂಡ ವಸೂಲಿ ಮಾಡಲಾಗಿದೆ.</p>.<p>ಮೊಬೈಲ್ ಆ್ಯಪ್ ಆಧರಿತ ಆಹಾರ ಸರಬರಾಜು ಮಾಡುವ ‘ಸ್ವಿಗ್ಗಿ’ ಕಂಪನಿಯ ಡೆಲಿವರಿ ಬಾಯ್ ಆಗಿರುವ ಆನಂದ್, ಜುಲೈ 13ರಂದು ಆಡುಗೋಡಿ ಸಿಗ್ನಲ್ ಜಂಪ್ ಮಾಡಿದ್ದರು. ಅದನ್ನು ಗಮನಿಸಿದ್ದ ಪೊಲೀಸರು, ಅವರನ್ನು ಬೆನ್ನಟ್ಟಿ ಬೈಕ್ ನಿಲ್ಲಿಸಿದ್ದರು. ಆನಂದ್ ಹೆಲ್ಮೆಟ್ ಸಹ ಧರಿಸಿರಲಿಲ್ಲ.</p>.<p>ಆನಂದ್ ಅವರ ಬೈಕ್ ನೋಂದಣಿ ಸಂಖ್ಯೆಯನ್ನು ಉಪಕರಣದಲ್ಲಿ ನಮೂದಿಸಿದ್ದರು. 53 ಬಾರಿ ನಿಯಮ ಉಲ್ಲಂಘನೆ ಮಾಡಿದ್ದು ಗಮನಕ್ಕೆ ಬಂದಿತ್ತು. ಬೈಕ್ ಸುಪರ್ದಿಗೆ ಪಡೆದ ಪೊಲೀಸರು, ದಂಡ ಪಾವತಿ ಮಾಡುವಂತೆ ರಶೀದಿ ನೀಡಿದ್ದರು. ದಂಡ ಪಾವತಿ ಮಾಡಿದ ಬಳಿಕವೇ ಬೈಕ್ ಬಿಟ್ಟು ಕಳುಹಿಸಿದ್ದಾರೆ.</p>.<p>‘ಆನಂದ್ ಅವರು ಒಂದೆರಡು ಬಾರಿ ಮಾತ್ರ ನಿಯಮ ಉಲ್ಲಂಘನೆ ಮಾಡಿರಬಹುದೆಂದು ಸುಮ್ಮನಾಗಿದ್ದೆವು. ಉಪಕರಣದಲ್ಲಿ ರಿಶೀದಿ ಮುದ್ರಿಸುವಾಗ ಕಾಗದದ ಒಂದು ಸುರುಳಿಯೇ ಖಾಲಿ ಆಯಿತು. ಮತ್ತೊಂದು ಸುರುಳಿ ಬಳಸಿ ರಶೀದಿ ಮುದ್ರಿಸಿ ನೀಡಲಾಯಿತು’ ಎಂದು ಪೊಲೀಸರು ಹೇಳಿದರು.</p>.<p>ಆಟೊ ಚಾಲಕನಿಗೆ 4,200 ದಂಡ: ಆಟೊ ಚಾಲಕ ಸಂತೋಷ್ ಎಂಬುವರು 42 ಬಾರಿ ನಿಯಮಗಳನ್ನು ಉಲ್ಲಂಘಿಸಿದ್ದು, ಅವರಿಗೆ 4,200 ದಂಡ ವಿಧಿಸಲಾಗಿದೆ.</p>.<p>‘ಮಂಗಳವಾರ ತಪಾಸಣೆ ವೇಳೆ ಸಂತೋಷ್ ಸಿಕ್ಕಿಬಿದ್ದಿದ್ದರು. ಅವರಿಂದ ದಂಡ ವಸೂಲಿ ಮಾಡಿದ್ದೇವೆ’ ಎಂದು ಆಡುಗೋಡಿ ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>53 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ಡೆಲಿವರಿ ಬಾಯ್ ಆನಂದ್ ಎಂಬುವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಅವರಿಂದ ₹ 5,300 ದಂಡ ವಸೂಲಿ ಮಾಡಲಾಗಿದೆ.</p>.<p>ಮೊಬೈಲ್ ಆ್ಯಪ್ ಆಧರಿತ ಆಹಾರ ಸರಬರಾಜು ಮಾಡುವ ‘ಸ್ವಿಗ್ಗಿ’ ಕಂಪನಿಯ ಡೆಲಿವರಿ ಬಾಯ್ ಆಗಿರುವ ಆನಂದ್, ಜುಲೈ 13ರಂದು ಆಡುಗೋಡಿ ಸಿಗ್ನಲ್ ಜಂಪ್ ಮಾಡಿದ್ದರು. ಅದನ್ನು ಗಮನಿಸಿದ್ದ ಪೊಲೀಸರು, ಅವರನ್ನು ಬೆನ್ನಟ್ಟಿ ಬೈಕ್ ನಿಲ್ಲಿಸಿದ್ದರು. ಆನಂದ್ ಹೆಲ್ಮೆಟ್ ಸಹ ಧರಿಸಿರಲಿಲ್ಲ.</p>.<p>ಆನಂದ್ ಅವರ ಬೈಕ್ ನೋಂದಣಿ ಸಂಖ್ಯೆಯನ್ನು ಉಪಕರಣದಲ್ಲಿ ನಮೂದಿಸಿದ್ದರು. 53 ಬಾರಿ ನಿಯಮ ಉಲ್ಲಂಘನೆ ಮಾಡಿದ್ದು ಗಮನಕ್ಕೆ ಬಂದಿತ್ತು. ಬೈಕ್ ಸುಪರ್ದಿಗೆ ಪಡೆದ ಪೊಲೀಸರು, ದಂಡ ಪಾವತಿ ಮಾಡುವಂತೆ ರಶೀದಿ ನೀಡಿದ್ದರು. ದಂಡ ಪಾವತಿ ಮಾಡಿದ ಬಳಿಕವೇ ಬೈಕ್ ಬಿಟ್ಟು ಕಳುಹಿಸಿದ್ದಾರೆ.</p>.<p>‘ಆನಂದ್ ಅವರು ಒಂದೆರಡು ಬಾರಿ ಮಾತ್ರ ನಿಯಮ ಉಲ್ಲಂಘನೆ ಮಾಡಿರಬಹುದೆಂದು ಸುಮ್ಮನಾಗಿದ್ದೆವು. ಉಪಕರಣದಲ್ಲಿ ರಿಶೀದಿ ಮುದ್ರಿಸುವಾಗ ಕಾಗದದ ಒಂದು ಸುರುಳಿಯೇ ಖಾಲಿ ಆಯಿತು. ಮತ್ತೊಂದು ಸುರುಳಿ ಬಳಸಿ ರಶೀದಿ ಮುದ್ರಿಸಿ ನೀಡಲಾಯಿತು’ ಎಂದು ಪೊಲೀಸರು ಹೇಳಿದರು.</p>.<p>ಆಟೊ ಚಾಲಕನಿಗೆ 4,200 ದಂಡ: ಆಟೊ ಚಾಲಕ ಸಂತೋಷ್ ಎಂಬುವರು 42 ಬಾರಿ ನಿಯಮಗಳನ್ನು ಉಲ್ಲಂಘಿಸಿದ್ದು, ಅವರಿಗೆ 4,200 ದಂಡ ವಿಧಿಸಲಾಗಿದೆ.</p>.<p>‘ಮಂಗಳವಾರ ತಪಾಸಣೆ ವೇಳೆ ಸಂತೋಷ್ ಸಿಕ್ಕಿಬಿದ್ದಿದ್ದರು. ಅವರಿಂದ ದಂಡ ವಸೂಲಿ ಮಾಡಿದ್ದೇವೆ’ ಎಂದು ಆಡುಗೋಡಿ ಪೊಲೀಸರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>