<p><strong>ಮುಂಡಗೋಡ (ಉತ್ತರ ಕನ್ನಡ):</strong> ಲಾಕ್ಡೌನ್ ಪರಿಣಾಮ ತಾಲ್ಲೂಕಿನ ಮೆಣಸಿನಕಾಯಿ ಬೆಳೆಗಾರರ ಮೇಲೆ ಬೀರಿದೆ. ಝಂಡುಬಾಮ್ ಅಥವಾ ತೇಜಸ್ವಿನಿ ತಳಿಯ ಮೆಣಸಿಕಾಯಿ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಮಾರುಕಟ್ಟೆಯಿಲ್ಲದೆ ಕೆಲವು ರೈತರು ಗದ್ದೆಯಲ್ಲೇ ಅದನ್ನು ನೆಲಸಮಗೊಳಿಸಲು ಮುಂದಾಗಿದ್ದಾರೆ.</p>.<p>ತಾಲ್ಲೂಕಿನಲ್ಲಿ ಹುನಗುಂದ, ಅಗಡಿ, ಅರಿಶಿಣಗೇರಿ, ನಂದಿಗಟ್ಟಾ, ಕುಂದರ್ಗಿ ಸೇರಿದಂತೆ ಹಲವೆಡೆ 250ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ರೈತರು ತೇಜಸ್ವಿನಿ ಮೆಣಸಿನಕಾಯಿ(414 ತಳಿ) ಬೆಳೆದಿದ್ದಾರೆ. ಮಹಾರಾಷ್ಟ್ರವೇ ಇದಕ್ಕೆ ಮುಖ್ಯ ಮಾರುಕಟ್ಟೆ. ಇದನ್ನು ಝಂಡುಬಾಮ್ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುತ್ತದೆ.</p>.<p>‘ಹಿಂದೆ ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಭಾಗದ ಮಧ್ಯವರ್ತಿಗಳು ಖರೀದಿಸಿ ಮುಂಬೈಗೆ ಸಾಗಿಸುತ್ತಿದ್ದರು. ಪ್ರತಿ ಕ್ವಿಂಟಲ್ಗೆ ಸರಾಸರಿ ₹ 6,000 ದರ ಇರುತ್ತಿತ್ತು. ಈಗ ಕಟಾವಿಗೆ ಬಂದು ತಿಂಗಳಾದರೂ ಖರೀದಿ ಮಾಡುವವರಿಲ್ಲ’ ಎಂದು ರೈತರಾದ ಸುಭಾಷ್ ಲಮಾಣಿ, ಮೋಹನ ಹರಮಲಕರ್, ಶಿವಾಜಿ ಲಮಾಣಿ, ಕಲ್ಮೇಶ ಲಮಾಣಿ, ಸಿಕಂದರ್ ಹುಬ್ಬಳ್ಳಿ ಹೇಳಿದರು.</p>.<p>‘ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ ₹ 40ಸಾವಿರ ಇದೆ. ಕೂಲಿ ಸೇರಿ ಎಕರೆಗೆ ₹1,800ರಷ್ಟು ಖರ್ಚು ತಗಲುತ್ತದೆ. ಈಗ ಪ್ರತಿ ಕ್ವಿಂಟಲ್ ಮೆಣಸಿನಕಾಯಿಗೆ ₹ 1,200 ದರವಿದೆ’ ಎಂದು ರೈತ ಅಬ್ದುಲ್ ರಹಿದ್ ಹೇಳಿದರು.</p>.<p>‘ಮುಂಬೈ ಮಾರುಕಟ್ಟೆ ಇನ್ನೂ ಒಂದು ತಿಂಗಳು ತೆರೆಯುವುದಿಲ್ಲ ಎನ್ನುತ್ತಾರೆ ದಲ್ಲಾಳಿಗಳು. ಈ ವರ್ಷ ಬೆಳೆ ಮಣ್ಣು ಪಾಲಾಗುವುದು ಖಚಿತ’ ಎಂದು ರೈತ ಯಲ್ಲಪ್ಪ ಮೇಲಿನಮನಿ ಕಣ್ಣೀರು ಹಾಕಿದರು.</p>.<p><strong>***</strong></p>.<p>ಎರಡು ದಿನಗಳಿಂದ ಕೆಲವು ಮಧ್ಯವರ್ತಿಗಳು ಖರೀದಿ ಮಾಡುತ್ತಿದ್ದಾರೆ. ಮುಂಬೈ ಮಾರುಕಟ್ಟೆ ಸೀಲ್ಡೌನ್ ಆಗಿದ್ದರಿಂದ ದರ ಕುಸಿತವಾಗಿದೆ</p>.<p><strong>- ಎಸ್.ಎಫ್.ಪಾಟೀಲ, ತೋಟಗಾರಿಕಾ ಇಲಾಖೆಯ ಅಧಿಕಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಡಗೋಡ (ಉತ್ತರ ಕನ್ನಡ):</strong> ಲಾಕ್ಡೌನ್ ಪರಿಣಾಮ ತಾಲ್ಲೂಕಿನ ಮೆಣಸಿನಕಾಯಿ ಬೆಳೆಗಾರರ ಮೇಲೆ ಬೀರಿದೆ. ಝಂಡುಬಾಮ್ ಅಥವಾ ತೇಜಸ್ವಿನಿ ತಳಿಯ ಮೆಣಸಿಕಾಯಿ ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಮಾರುಕಟ್ಟೆಯಿಲ್ಲದೆ ಕೆಲವು ರೈತರು ಗದ್ದೆಯಲ್ಲೇ ಅದನ್ನು ನೆಲಸಮಗೊಳಿಸಲು ಮುಂದಾಗಿದ್ದಾರೆ.</p>.<p>ತಾಲ್ಲೂಕಿನಲ್ಲಿ ಹುನಗುಂದ, ಅಗಡಿ, ಅರಿಶಿಣಗೇರಿ, ನಂದಿಗಟ್ಟಾ, ಕುಂದರ್ಗಿ ಸೇರಿದಂತೆ ಹಲವೆಡೆ 250ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ರೈತರು ತೇಜಸ್ವಿನಿ ಮೆಣಸಿನಕಾಯಿ(414 ತಳಿ) ಬೆಳೆದಿದ್ದಾರೆ. ಮಹಾರಾಷ್ಟ್ರವೇ ಇದಕ್ಕೆ ಮುಖ್ಯ ಮಾರುಕಟ್ಟೆ. ಇದನ್ನು ಝಂಡುಬಾಮ್ ತಯಾರಿಕೆಗೆ ಹೆಚ್ಚಾಗಿ ಬಳಸಲಾಗುತ್ತದೆ.</p>.<p>‘ಹಿಂದೆ ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಭಾಗದ ಮಧ್ಯವರ್ತಿಗಳು ಖರೀದಿಸಿ ಮುಂಬೈಗೆ ಸಾಗಿಸುತ್ತಿದ್ದರು. ಪ್ರತಿ ಕ್ವಿಂಟಲ್ಗೆ ಸರಾಸರಿ ₹ 6,000 ದರ ಇರುತ್ತಿತ್ತು. ಈಗ ಕಟಾವಿಗೆ ಬಂದು ತಿಂಗಳಾದರೂ ಖರೀದಿ ಮಾಡುವವರಿಲ್ಲ’ ಎಂದು ರೈತರಾದ ಸುಭಾಷ್ ಲಮಾಣಿ, ಮೋಹನ ಹರಮಲಕರ್, ಶಿವಾಜಿ ಲಮಾಣಿ, ಕಲ್ಮೇಶ ಲಮಾಣಿ, ಸಿಕಂದರ್ ಹುಬ್ಬಳ್ಳಿ ಹೇಳಿದರು.</p>.<p>‘ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ ₹ 40ಸಾವಿರ ಇದೆ. ಕೂಲಿ ಸೇರಿ ಎಕರೆಗೆ ₹1,800ರಷ್ಟು ಖರ್ಚು ತಗಲುತ್ತದೆ. ಈಗ ಪ್ರತಿ ಕ್ವಿಂಟಲ್ ಮೆಣಸಿನಕಾಯಿಗೆ ₹ 1,200 ದರವಿದೆ’ ಎಂದು ರೈತ ಅಬ್ದುಲ್ ರಹಿದ್ ಹೇಳಿದರು.</p>.<p>‘ಮುಂಬೈ ಮಾರುಕಟ್ಟೆ ಇನ್ನೂ ಒಂದು ತಿಂಗಳು ತೆರೆಯುವುದಿಲ್ಲ ಎನ್ನುತ್ತಾರೆ ದಲ್ಲಾಳಿಗಳು. ಈ ವರ್ಷ ಬೆಳೆ ಮಣ್ಣು ಪಾಲಾಗುವುದು ಖಚಿತ’ ಎಂದು ರೈತ ಯಲ್ಲಪ್ಪ ಮೇಲಿನಮನಿ ಕಣ್ಣೀರು ಹಾಕಿದರು.</p>.<p><strong>***</strong></p>.<p>ಎರಡು ದಿನಗಳಿಂದ ಕೆಲವು ಮಧ್ಯವರ್ತಿಗಳು ಖರೀದಿ ಮಾಡುತ್ತಿದ್ದಾರೆ. ಮುಂಬೈ ಮಾರುಕಟ್ಟೆ ಸೀಲ್ಡೌನ್ ಆಗಿದ್ದರಿಂದ ದರ ಕುಸಿತವಾಗಿದೆ</p>.<p><strong>- ಎಸ್.ಎಫ್.ಪಾಟೀಲ, ತೋಟಗಾರಿಕಾ ಇಲಾಖೆಯ ಅಧಿಕಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>