‘ಅಸ್ಸಾಂನ ಬಕ್ಸಾ ಮತ್ತು ಉದಲ್ಗಿರಿ ಜಿಲ್ಲೆಗಳ ರೈತರಿಗೆ ನೀರು ಪೂರೈಸುವುದನ್ನು ಭೂತಾನ್ ತಡೆಹಿಡಿದಿದೆ ಎಂದು ಭಾರತದ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಈ ಆರೋಪಗಳು ಆಧಾರ ರಹಿತವಾಗಿವೆ. ಇದುಭಾರತ ಮತ್ತು ಭೂತಾನ್ ನಡುವೆ ಗೊಂದಲ ಸೃಷ್ಟಿಸುವ ಯತ್ನವಾಗಿದೆ.ಯಾವುದೇ ಕಾರಣವಿಲ್ಲದೇ ಭೂತಾನ್ ಯಾಕೆ ನೀರಿನ ಸರಬರಾಜನ್ನು ನಿಲ್ಲಿಸುತ್ತದೆ’ ಎಂದು ಭೂತಾನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪ್ರಶ್ನಿಸಿದೆ.