ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ashish Nehra

ADVERTISEMENT

ರಿಷಿ ಬ್ರಿಟನ್‌ ಪ್ರಧಾನಿ ಹುದ್ದೆಗೇರಿದ್ದಕ್ಕೆ ನೆಹ್ರಾ ಬಗ್ಗೆ ದೂಸ್ರಾ ಮಾತೇಕೆ?

ಕೋಹಿನೂರ್‌ ವಜ್ರವನ್ನು ವಾಪಸ್‌ ತರುವಂತೆ ಆಶಿಶ್‌ ನೆಹ್ರಾಗೆ ವಿನಂತಿಸಲಾಗುತ್ತಿದೆ.
Last Updated 25 ಅಕ್ಟೋಬರ್ 2022, 5:43 IST
ರಿಷಿ ಬ್ರಿಟನ್‌ ಪ್ರಧಾನಿ ಹುದ್ದೆಗೇರಿದ್ದಕ್ಕೆ ನೆಹ್ರಾ ಬಗ್ಗೆ ದೂಸ್ರಾ ಮಾತೇಕೆ?

ಕೊಹ್ಲಿ ಬದಲು ನಾಯಕನ ಸ್ಥಾನಕ್ಕೆ ಆಶಿಶ್‌ ನೆಹ್ರಾ ಸೂಚಿಸಿದ ಆಟಗಾರ ಯಾರು ಗೊತ್ತಾ?

ಟಿ–20 ವಿಶ್ವಕಪ್‌ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರು ಟಿ–20 ನಾಯಕತ್ವ ತ್ಯಜಿಸಲಿದ್ದಾರೆ. ಹಾಗಾಗಿ ಕೊಹ್ಲಿ ಬದಲು ಯಾರಿಗೆ ನಾಯಕತ್ವ ಒಲಿಯಲಿದೆ ಎಂಬ ಚರ್ಚೆಗಳು ಆರಂಭಗೊಂಡಿವೆ.
Last Updated 7 ನವೆಂಬರ್ 2021, 7:57 IST
ಕೊಹ್ಲಿ ಬದಲು ನಾಯಕನ ಸ್ಥಾನಕ್ಕೆ ಆಶಿಶ್‌ ನೆಹ್ರಾ ಸೂಚಿಸಿದ ಆಟಗಾರ ಯಾರು ಗೊತ್ತಾ?

IPL-2020: ಐಪಿಎಲ್‌ನಲ್ಲಿ ಆರ್‌ಸಿಬಿ ಹಿನ್ನಡೆಗೆ ನೆಹ್ರಾ ಕೊಟ್ಟ ಕಾರಣವೇನು?

ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ವಿರುದ್ಧ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಸೋಲು ಕಂಡು ಐಪಿಎಲ್‌–2020 ಟೂರ್ನಿಯಿಂದ ಹೊರಬಿದ್ದಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಸತತ 13ನೇ ವರ್ಷವೂ ಪ್ರಶಸ್ತಿ ಗೆಲ್ಲಲು ವಿಫಲವಾಗಿದೆ. ಇದರೊಂದಿಗೆ ಕಳೆದ 8 ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿರುವ ವಿರಾಟ್‌ ಕೊಹ್ಲಿ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಪ್ರತಿ ಬಾರಿಯು ಆರ್‌ಸಿಬಿ ವೈಫಲ್ಯ ಅನುಭವಿಸುತ್ತಿರುವುದಕ್ಕೆ ಕಾರಣವೇನು ಎಂಬುದಕ್ಕೆ ಸಂಬಂಧಿಸಿದಂತೆ ಈ ತಂಡದ ಮಾಜಿ ಬೌಲಿಂಗ್ ಕೋಚ್‌ ಆಶಿಶ್‌ ನೆಹ್ರಾ ಕ್ರೀಡಾವಾಹಿನಿಯೊಂದರ ಸಂವಾದದಲ್ಲಿ ಮಾತನಾಡಿದ್ದಾರೆ. ಈ ತಂಡವು ವಿರಾಟ್‌ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್‌ ಅವರನ್ನು ಹೆಚ್ಚಾಗಿ ಅವಲಂಭಿಸಿದೆ. ಮಾತ್ರವಲ್ಲದೆ ಪ್ರತಿ ವರ್ಷ ನಡೆಯುವ ಹರಾಜು ಪ್ರಕ್ರಿಯೆ ವೇಳೆ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗುತ್ತದೆ. ಇದು ಹಿನ್ನಡೆಗೆ ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಆರ್‌ಸಿಬಿ ವಿರಾಟ್‌ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್‌ ಅವರನ್ನು ಅಪಾರವಾಗಿ ಅವಲಂಬಿಸಿದೆ. ಇಡೀ ತಂಡವು ಅವರ ಸುತ್ತ ಸುತ್ತುತ್ತಿರುತ್ತದೆ. 11 ಆಟಗಾರರ ಕ್ರೀಡೆಯಲ್ಲಿ ಇದು ಸರಿಯಾದ ಕ್ರಮವಲ್ಲ. ನೀವು ಕನಿಷ್ಠ ಐವರು ಆಟಗಾರರನ್ನು ನಿಮ್ಮಲ್ಲೇ ಇರಿಸಿಕೊಳ್ಳಬೇಕು. ಕಿಂಗ್ಸ್‌ ಇಲವೆನ್‌ ಪಂಜಾಬ್‌ ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದೆ. ಈ ತಂಡವೂ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿರುತ್ತದೆ. ನೀವು ಕನಿಷ್ಠ ನಾಲ್ಕೈದು ಆಟಗಾರರನ್ನಾದರೂ ಉಳಿಸಿಕೊಳ್ಳಬೇಕು. ಆ್ಯರನ್‌ ಫಿಂಚ್‌ ಅವರು ಮುಂದಿನ ವರ್ಷ ಆರ್‌ಸಿಬಿಯಲ್ಲೇ ಇರುತ್ತಾರೆಯೇ ಎಂಬುದು ಕುತೂಹಲಕಾರಿ. ಕಳೆದ ವರ್ಷ ಶಿಮ್ರೋನ್‌ ಹೆಟ್ಮೆಯರ್, ಮಾರ್ಕಸ್‌ ಸ್ಟೋಯಿನಸ್‌ ತಂಡದಲ್ಲಿದ್ದರು’ ಎಂದು ನೆಹ್ರಾ ಹೇಳಿದ್ದಾರೆ.
Last Updated 8 ನವೆಂಬರ್ 2020, 12:26 IST
IPL-2020: ಐಪಿಎಲ್‌ನಲ್ಲಿ ಆರ್‌ಸಿಬಿ ಹಿನ್ನಡೆಗೆ ನೆಹ್ರಾ ಕೊಟ್ಟ ಕಾರಣವೇನು?

ಧೋನಿ ಸ್ಥಾನಕ್ಕೆ ಪಂತ್ ಸೂಕ್ತ: ಆಶಿಶ್ ನೆಹ್ರಾ–ಸಂಜಯ್ ಬಂಗಾರ್ ಅಭಿಪ್ರಾಯ

ಮಹೇಂದ್ರ ಸಿಂಗ್‌ ಧೋನಿ ಅವರ ವಿದಾಯದಿಂದಾಗಿ ಟೀಂ ಇಂಡಿಯಾದಲ್ಲಿ ತೆರವಾಗಿರುವ ವಿಕೆಟ್‌ಕೀಪರ್ ಸ್ಥಾನವನ್ನು ತುಂಬಲು ಯುವ ಆಟಗಾರ ರಿಷಭ್‌ ಪಂತ್‌ ಸೂಕ್ತ ಎಂದು ಮಾಜಿ ಕ್ರಿಕೆಟಿಗರಾದ ಆಶಿಶ್‌ ನೆಹ್ರಾ ಮತ್ತು ಸಂಜಯ್‌ ಬಂಗಾರ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 6 ಅಕ್ಟೋಬರ್ 2020, 10:38 IST
ಧೋನಿ ಸ್ಥಾನಕ್ಕೆ ಪಂತ್ ಸೂಕ್ತ: ಆಶಿಶ್ ನೆಹ್ರಾ–ಸಂಜಯ್ ಬಂಗಾರ್ ಅಭಿಪ್ರಾಯ

ಅಕ್ಟೋಬರ್‌ನಲ್ಲಿ ಐಪಿಎಲ್‌ ಆದರೆ ಒಳ್ಳೆಯದು: ಆಶಿಶ್ ನೆಹ್ರಾ

ಅಕ್ಟೋಬರ್ ಮಾಸಾಂತ್ಯದಲ್ಲಿ ವಿಶ್ವದೆಲ್ಲೆಡೆ ಕೊರೊನಾ ವೈರಸ್‌ ಹತೋಟಿಗೆ ಬಂದರೆ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯನ್ನು ಆಯೋಜಿಸಲು ಸಾಧ್ಯವಾಗಲಿದೆ ಎಂದು ಹಿರಿಯ ಕ್ರಿಕೆಟಿಗ ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.
Last Updated 8 ಏಪ್ರಿಲ್ 2020, 13:02 IST
ಅಕ್ಟೋಬರ್‌ನಲ್ಲಿ ಐಪಿಎಲ್‌ ಆದರೆ ಒಳ್ಳೆಯದು: ಆಶಿಶ್ ನೆಹ್ರಾ

ಕರ್ನಾಟಕ ಆಟಗಾರರನ್ನು ಪಡೆಯುವ ಯೋಜನೆ ಕೈಗೂಡಲಿಲ್ಲ: ನೆಹ್ರಾ

ಬೆಂಗಳೂರು: ಆಟಗಾರರ ಹರಾಜು ಪ್ರಕ್ರಿಯೆಯಲ್ಲಿರುವ ನಿಯಮಗಳು ಮತ್ತು ಅಪಾರ ಪೈಪೋಟಿಯಿಂದಾಗಿ ನಮ್ಮ ಯೋಜನೆಗಳು ಈಡೇರುವುದು ಕಷ್ಟ. ಅದಕ್ಕಾಗಿಯೇ ನಾವು ಕರ್ನಾಟಕದ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳಲು ಮಾಡಿದ ಪ್ರಯತ್ನಗಳು ಕೈಗೂಡಲಿಲ್ಲ. ಮನೀಷ್ ಪಾಂಡೆ ಮತ್ತು ಮಯಂಕ್ ಅಗರವಾಲ್ ಅವರನ್ನು ಪಡೆಯಲು ಶತಪ್ರಯತ್ನ ಮಾಡಿದ್ದೆವು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಬೌಲಿಂಗ್ ಸಲಹೆಗಾರ ಆಶಿಶ್ ನೆಹ್ರಾ ಹೇಳಿದರು.
Last Updated 16 ಮಾರ್ಚ್ 2019, 20:10 IST
ಕರ್ನಾಟಕ ಆಟಗಾರರನ್ನು ಪಡೆಯುವ ಯೋಜನೆ ಕೈಗೂಡಲಿಲ್ಲ: ನೆಹ್ರಾ
ADVERTISEMENT
ADVERTISEMENT
ADVERTISEMENT
ADVERTISEMENT