<p><strong>ಮುಂಬೈ:</strong> 2019ರಲ್ಲಿ ತೆರೆಕಂಡ ಅಕ್ಷಯ್ ಕುಮಾರ್ ನಟನೆಯ ಕೇಸರಿ ಚಿತ್ರದ 'ತೇರಿ ಮಿಟ್ಟಿ' ಹಾಡು ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ. ಈ ಹಾಡಿನ ಸಾಲುಗಳನ್ನು ಸ್ವಲ್ಪ ಬದಲಿಸಿ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರಿಗೆ ಅರ್ಪಿಸಲಾಗಿದೆ.</p>.<p>'ತೇರಿ ಮಿಟ್ಟಿ' ಹಾಡಿನಹೊಸ ಆವೃತ್ತಿಯನ್ನು ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದು. ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್, ಆರೋಗ್ಯ ಕಾರ್ಯಕರ್ತರ ಕೆಲಸಕ್ಕೆ ಸಲಾಂ ಹೇಳಿದ್ದಾರೆ.</p>.<p>ಇಂದೋರ್ನಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯ ದೃಶ್ಯ, ವೈದ್ಯರ ಮೇಲೆ ಹಲ್ಲೆ ನಿಲ್ಲಿಸಿ ಎಂಬ ಪ್ಲೆಕಾರ್ಡ್ ಹಿಡಿದಿರುವುದು, ಬೆಳಗಾವಿಯ ನರ್ಸ್ ಸುನಂದಾಳ ಮಗಳು ಅಮ್ಮಾ ಬಾ ಎಂದು ಅಳುತ್ತಿರುವ ದೃಶ್ಯವೂ ಈ ವಿಡಿಯೊದಲ್ಲಿದೆ.</p>.<p>ಬಿಳಿವಸ್ತ್ರಧಾರಿ ಹೀರೊಗಳಿಗೆ ಈ ಹಾಡು ಅರ್ಪಣೆ ಎಂದು ಟ್ವೀಟ್ ಮಾಡಿರುವ ಅಕ್ಷಯ್ , ವೈದ್ಯರು ದೇವರ ರೂಪ ಎಂದು ಹೇಳುತ್ತಾರೆ. ಆದರೆ ಕೊರೊನಾವೈರಸ್ ವಿರುದ್ಧದ ಈ ಹೋರಾಟದ ಆ ಸಮಯದಲ್ಲಿ ದೇವರೇ ವೈದ್ಯರ ರೂಪದಲ್ಲಿ ಬಂದಿದ್ದಾರೆ ಎಂಬ ಸಂದೇಶವನ್ನು ನೀಡಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> 2019ರಲ್ಲಿ ತೆರೆಕಂಡ ಅಕ್ಷಯ್ ಕುಮಾರ್ ನಟನೆಯ ಕೇಸರಿ ಚಿತ್ರದ 'ತೇರಿ ಮಿಟ್ಟಿ' ಹಾಡು ಟ್ವಿಟರ್ನಲ್ಲಿ ಟ್ರೆಂಡ್ ಆಗಿದೆ. ಈ ಹಾಡಿನ ಸಾಲುಗಳನ್ನು ಸ್ವಲ್ಪ ಬದಲಿಸಿ ಕೋವಿಡ್ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರಿಗೆ ಅರ್ಪಿಸಲಾಗಿದೆ.</p>.<p>'ತೇರಿ ಮಿಟ್ಟಿ' ಹಾಡಿನಹೊಸ ಆವೃತ್ತಿಯನ್ನು ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದು. ಕೋವಿಡ್ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್, ಆರೋಗ್ಯ ಕಾರ್ಯಕರ್ತರ ಕೆಲಸಕ್ಕೆ ಸಲಾಂ ಹೇಳಿದ್ದಾರೆ.</p>.<p>ಇಂದೋರ್ನಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯ ದೃಶ್ಯ, ವೈದ್ಯರ ಮೇಲೆ ಹಲ್ಲೆ ನಿಲ್ಲಿಸಿ ಎಂಬ ಪ್ಲೆಕಾರ್ಡ್ ಹಿಡಿದಿರುವುದು, ಬೆಳಗಾವಿಯ ನರ್ಸ್ ಸುನಂದಾಳ ಮಗಳು ಅಮ್ಮಾ ಬಾ ಎಂದು ಅಳುತ್ತಿರುವ ದೃಶ್ಯವೂ ಈ ವಿಡಿಯೊದಲ್ಲಿದೆ.</p>.<p>ಬಿಳಿವಸ್ತ್ರಧಾರಿ ಹೀರೊಗಳಿಗೆ ಈ ಹಾಡು ಅರ್ಪಣೆ ಎಂದು ಟ್ವೀಟ್ ಮಾಡಿರುವ ಅಕ್ಷಯ್ , ವೈದ್ಯರು ದೇವರ ರೂಪ ಎಂದು ಹೇಳುತ್ತಾರೆ. ಆದರೆ ಕೊರೊನಾವೈರಸ್ ವಿರುದ್ಧದ ಈ ಹೋರಾಟದ ಆ ಸಮಯದಲ್ಲಿ ದೇವರೇ ವೈದ್ಯರ ರೂಪದಲ್ಲಿ ಬಂದಿದ್ದಾರೆ ಎಂಬ ಸಂದೇಶವನ್ನು ನೀಡಿದ್ದಾರೆ.<br /></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>