ಉದ್ಘಾಟನೆ ವೇಳೆ ಫಲಕ ಅಲ್ಲಿರಲಿಲ್ಲ
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಫಲಕದ ಚಿತ್ರ ಸುಳ್ಳು ಸುದ್ದಿಯಾಗಿದ್ದು, ಬುಧವಾರ ಪ್ರತಿಮೆ ಉದ್ಛಾಟನೆ ವೇಳೆ ಆ ಫಲಕ ಇರಲಿಲ್ಲ. ತಪ್ಪಾಗಿ ತಮಿಳು ಅನುವಾದ ಮಾಡಿರುವ ಫಲಕದ ಚಿತ್ರ ಯಾರೋ ದುರುದ್ದೇಶದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿದ್ದಾರೆ.ನಿಜವಾದ ಫಲಕವಾಗಿದ್ದರೆ ಅದರಲ್ಲಿ ಸರ್ಕಾರದ ಲೋಗೊ ಇರುತ್ತಿತ್ತು.ಅದೇ ವೇಳೆ ಚಿತ್ರದಲ್ಲಿ ತೋರಿಸಿದಂತೆ ಫಲಕದಲ್ಲಿ ವಿದೇಶಿ ಭಾಷೆಗಳನ್ನು ಬಳಸುವ ಬಗ್ಗೆ ಇಲ್ಲಿಯವರೆಗೆ ಯಾವುದೇ ಚಿಂತನೆ ನಡೆಸಿಲ್ಲ.ನಾವು ವಿದೇಶದಿಂದ, ವಿಶೇಷವಾಗಿ ರಷ್ಯಾ ಮತ್ತು ಯುರೋಪ್ನಿಂದ ಪ್ರವಾಸಿಗಳು ಬರುತ್ತಾರೆ ಎಂದು ನಿರೀಕ್ಷಿಸುವುದಿಲ್ಲ.ಹಾಗೊಂದು ಫಲಕ ಹಾಕುವುದಾದರೆ ಅದರಲ್ಲಿ ಭಾರತೀಯ ಭಾಷೆಗಳನ್ನು ಬಳಸಲಾಗುವುದು, ದೇಶದ ಏಕತೆಯನ್ನು ಬಿಂಬಿಸಲು ಇದು ಸಹಕಾರಿ ಎಂದು ಸರ್ದಾರ್ ಸರೋವರ್ ನಿಗಮದ ಹಿರಿಯ ಅಧಿಕಾರಿಯೊಬ್ಬರುಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿದೆ.