<p><strong>ಶಿಮ್ಲಾ</strong>: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ನಿಗಮದ ಚಾಲಕನೊಬ್ಬ ತನ್ನ ಮನೆಯ ಛಾವಣಿಯ ಮೇಲೆ ಸರ್ಕಾರಿ ಬಸ್ಸಿನ ರಚನೆ ರಚಿಸಿ ಗಮನ ಸೆಳೆದಿದ್ದಾರೆ.</p><p>2016ರಿಂದ ಸಾರಿಗೆ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಧರ್ ಅವರ ಮನೆ ಮೇಲೆ ಈ ಸರ್ಕಾರಿ ಬಸ್ನ ಪ್ರತಿಕೃತಿ ರಚನೆಯಾಗಿದೆ.</p><p>ಬಸ್ನ ರಚನೆ, ಒಳಗಿನ ಆಸನಗಳು, ಸ್ಟೇರಿಂಗ್, ಚಕ್ರಗಳು ಸರ್ಕಾರಿ ಬಸ್ನ ಪ್ರತಿಬಿಂಬದಂತಿದೆ. ದೂರದಿಂದ ನೋಡಿದಾಗ ಸಾರಿಗೆ ನಿಗಮದ ಬಸ್ನಂತೆಯೇ ಕಾಣುತ್ತದೆ. ಈ ವಿಶಿಷ್ಟ ಬಸ್ ಈಗ ಇಡೀ ಜಿಲ್ಲೆಯ ಆಕರ್ಷಣೆಯ ಕೇಂದ್ರವಾಗಿದೆ.</p><p>‘ನಾನು ರಜೆಯ ಸಮಯದಲ್ಲಿ ಮನೆಯಲ್ಲಿದ್ದಾಗಲೆಲ್ಲಾ, ಈ ಬಸ್ನಲ್ಲಿ ಕುಳಿತು, ಊಟ ಮಾಡಿ ಸಮಯ ಕಳೆಯುತ್ತೇನೆ. ಇದು ಕೇವಲ ಒಂದು ರಚನೆಯಲ್ಲ, ಬದಲಾಗಿ ಕಠಿಣ ಪರಿಶ್ರಮ ಮತ್ತು ಗುರುತಿನ ಸಂಕೇತವಾಗಿದೆ’ ಎಂದು ಶ್ರೀಧರ್ ಹೇಳಿದ್ದಾರೆ.</p><p>‘ಸಾರಿಗೆ ನಿಗಮಕ್ಕೆ ಚಾಲಕನಾಗಿ ಸೇರಿದ ನಂತರ ಜೀವನ ಸಂಪೂರ್ಣವಾಗಿ ಬದಲಾಗಿದೆ. ಸರ್ಕಾರಿ ಬಸ್ ಚಾಲಕನಾಗಿ ಇರುವುದು ಕೇವಲ ಉದ್ಯೋಗವಲ್ಲ ಮಾತ್ರಲ್ಲ. ನನ್ನಿಷ್ಟದ ಕೆಲಸವೂ ಹೌದು. ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರೂ ಈ ಬಸ್ಅನ್ನು ನೋಡಲು ಬರುತ್ತಿದ್ದಾರೆ‘ ಎಂದು ಎಂದು ಶ್ರೀಧರ್ ಖುಷಿ ಹಂಚಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಮ್ಲಾ</strong>: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ರಾಜ್ಯ ಸಾರಿಗೆ ನಿಗಮದ ಚಾಲಕನೊಬ್ಬ ತನ್ನ ಮನೆಯ ಛಾವಣಿಯ ಮೇಲೆ ಸರ್ಕಾರಿ ಬಸ್ಸಿನ ರಚನೆ ರಚಿಸಿ ಗಮನ ಸೆಳೆದಿದ್ದಾರೆ.</p><p>2016ರಿಂದ ಸಾರಿಗೆ ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಧರ್ ಅವರ ಮನೆ ಮೇಲೆ ಈ ಸರ್ಕಾರಿ ಬಸ್ನ ಪ್ರತಿಕೃತಿ ರಚನೆಯಾಗಿದೆ.</p><p>ಬಸ್ನ ರಚನೆ, ಒಳಗಿನ ಆಸನಗಳು, ಸ್ಟೇರಿಂಗ್, ಚಕ್ರಗಳು ಸರ್ಕಾರಿ ಬಸ್ನ ಪ್ರತಿಬಿಂಬದಂತಿದೆ. ದೂರದಿಂದ ನೋಡಿದಾಗ ಸಾರಿಗೆ ನಿಗಮದ ಬಸ್ನಂತೆಯೇ ಕಾಣುತ್ತದೆ. ಈ ವಿಶಿಷ್ಟ ಬಸ್ ಈಗ ಇಡೀ ಜಿಲ್ಲೆಯ ಆಕರ್ಷಣೆಯ ಕೇಂದ್ರವಾಗಿದೆ.</p><p>‘ನಾನು ರಜೆಯ ಸಮಯದಲ್ಲಿ ಮನೆಯಲ್ಲಿದ್ದಾಗಲೆಲ್ಲಾ, ಈ ಬಸ್ನಲ್ಲಿ ಕುಳಿತು, ಊಟ ಮಾಡಿ ಸಮಯ ಕಳೆಯುತ್ತೇನೆ. ಇದು ಕೇವಲ ಒಂದು ರಚನೆಯಲ್ಲ, ಬದಲಾಗಿ ಕಠಿಣ ಪರಿಶ್ರಮ ಮತ್ತು ಗುರುತಿನ ಸಂಕೇತವಾಗಿದೆ’ ಎಂದು ಶ್ರೀಧರ್ ಹೇಳಿದ್ದಾರೆ.</p><p>‘ಸಾರಿಗೆ ನಿಗಮಕ್ಕೆ ಚಾಲಕನಾಗಿ ಸೇರಿದ ನಂತರ ಜೀವನ ಸಂಪೂರ್ಣವಾಗಿ ಬದಲಾಗಿದೆ. ಸರ್ಕಾರಿ ಬಸ್ ಚಾಲಕನಾಗಿ ಇರುವುದು ಕೇವಲ ಉದ್ಯೋಗವಲ್ಲ ಮಾತ್ರಲ್ಲ. ನನ್ನಿಷ್ಟದ ಕೆಲಸವೂ ಹೌದು. ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರೂ ಈ ಬಸ್ಅನ್ನು ನೋಡಲು ಬರುತ್ತಿದ್ದಾರೆ‘ ಎಂದು ಎಂದು ಶ್ರೀಧರ್ ಖುಷಿ ಹಂಚಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>