<p><strong>ಫತೇಪುರ್:</strong> ‘ನಾಯಿ ಬೊಗಳಿದರೆ ದೇವಲೋಕ ಹಾಳಾದೀತೆ’ ಎಂಬ ಗಾದೆ ಮಾತನ್ನು ಎಲ್ಲರೂ ಕೇಳಿರುತ್ತೇವೆ. ನಿಜ, ನಾಯಿ ಬೊಗಳಿದರೆ, ಯಾರೂ ಸಹ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಇಲ್ಲೊಂದು ಪ್ರಕರಣದಲ್ಲಿ ನಾಯಿ ಬೊಗಳಿದ ಕಾರಣಕ್ಕೆ ವಿವಾಹವೇ ನಿಂತುಹೋಗಿರುವ ಘಟನೆಯೊಂದು ನಡೆದಿದೆ. </p><p>ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಸಂಭ್ರಮದ ವಿವಾಹ ಕಾರ್ಯಕ್ರಮವೊಂದು ಸಾಕುನಾಯಿ ಬೊಗಳಿದ ಕಾರಣಕ್ಕೆ ನಿಂತುಹೋಗಿದೆ. ನಾಯಿಯು ವಧು ಹಾಗೂ ವರ ಎರಡೂ ಕುಟುಂಬಗಳ ಘರ್ಷಣೆಗೆ ಕಾರಣವಾಗಿದೆ, ಈ ಘರ್ಷಣೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ.</p><p>ಸುನಿಲ್ ಕುಮಾರ್ ಮತ್ತು ಸರೋಜ್ ಗುಪ್ತಾ ಎಂಬುವವರ ಮಗಳು ತಾನ್ಯಾ ಕೇಶರ್ವಾನಿ ಮತ್ತು ರಾಕೇಶ್ ಚಂದಾ ಮತ್ತು ಬಬ್ಲಿ ದೇವಿ ಅವರ ಮಗ ಸುಮಿತ್ ಇಬ್ಬರು ಪ್ರೀತಿಸಿ ಜನವರಿಯಲ್ಲಿ ವಿವಾಹವಾಗಿದ್ದರು. ಆದರೆ, ಕುಟುಂಬ ಸದಸ್ಯರು ಈ ಜೋಡಿಯ ಔಪಚಾರಿಕ ವಿವಾಹ ಕಾರ್ಯಕ್ರಮವನ್ನು ಫೆಬ್ರುವರಿ 18 ರಂದು ಫತೇಪುರ ಹಿಲ್ಲೆಯಲ್ಲಿ ಆಯೋಜನೆ ಮಾಡಿದ್ದರು.</p><p>ಆದರೆ, ಸುಗಮವಾಗಿ ನಡೆಯಬೇಕಿದ್ದ ವಿವಾಹ ಕಾರ್ಯಕ್ರಮವು ನಾಯಿಯಿಂದಾಗಿ ನಿಂತು ಹೋಗಿದೆ. ಮಾತ್ರವಲ್ಲ, ಉಭಯ ಕುಟುಂಬಗಳ ನಡುವೆ ನಡೆದ ಘರ್ಷಣೆಯಲ್ಲಿ ಅನೇಕರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. </p><p><strong>ನಾಯಿಯಿಂದಾದ ಪ್ರಮಾದವೇನು?</strong></p><p>ಮದುವೆ ದಿನ ಬೆಳಿಗ್ಗೆ 4 ಗಂಟೆ ಸುಮಾರಿಗೆ ಉಭಯ ಕುಟುಂಬ ಸದಸ್ಯರು ಹಾಗೂ ಬಂಧುಗಳು ಒಂದೆಡೆ ಸೇರಲು ಪ್ರಾರಂಭಿಸಿದರು. ಆ ಸಂದರ್ಭದಲ್ಲಿ ವಧುವಿನ ಕುಟುಂಬದ ಸಾಕು ನಾಯಿ ಆಕ್ರಮಣಕಾರಿಯಾಗಿ ಬೊಗಳಲು ಪ್ರಾರಂಭಿಸಿದೆ. ಈ ವೇಳೆ, ವರನ ಕಡೆಯ ಯುವಕನೊಬ್ಬ ನಾಯಿಯನ್ನು ಹೊಡೆಯುತ್ತಾನೆ. ಈ ವೇಳೆ ನಾಯಿಗೆ ಹೊಡೆದಿದ್ದಕ್ಕೆ ವಧುವಿನ ಕಡೆಯವರು ಆಕ್ರೋಶ ವ್ಯಕ್ತಪಡಿಸುತ್ತಾರೆ.</p><p>ಹೀಗೆ ಆರಂಭವಾದ ಘರ್ಷಣೆ ಮಾರಾಮಾರಿ ಹಂತ ತಲುಪುತ್ತದೆ. ಘರ್ಷಣೆಯ ವೇಳೆ, ಉಭಯ ಸಂಬಂಧಿಕರು ಸಿಕ್ಕ ಸಿಕ್ಕ ವಸ್ತುವಿನಿಂದ ಹೊಡೆದಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಮಹಿಳೆಯರು ಸೇರಿ ಕನಿಷ್ಠ 8 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.</p><p>ಬಳಿಕ ಉಭಯ ಕುಟುಂಬಸ್ಥರು ಖಾಗಾ ಪೊಲೀಸ್ ಠಾಣೆಗೆ ಹೋಗಿ, ಅಲ್ಲಿ ಪೊಲೀಸರ ಸಮ್ಮುಖದಲ್ಲಿ ಮದುವೆಯನ್ನು ಅಧಿಕೃತವಾಗಿ ರದ್ದುಗೊಳಿಸಿದ್ದಾರೆ. </p><p>ಆದರೆ, ವಧು ತಾನ್ಯಾ ಅವರು ವಿವಾಹ ರದ್ಧತಿಯನ್ನು ನಿರಾಕರಿಸಿ, ಕುಟುಂಬ ಸದಸ್ಯರ ಜೊತೆ ಮಾತನಾಡಿದ ಬಳಿಕ ಪ್ರಯಾಗ್ರಾಜ್ನ ತಮ್ಮ ಮನೆಯಿಂದ ವರನ ಮನೆಗೆ ಬಂದಿದ್ದಾಳೆ. ಆ ಸಂದರ್ಭದಲ್ಲಿ, ಹುಡುಗನ ಮನೆಯವರು ಆಕೆಯನ್ನು ಮನೆಯಿಂದ ಹೊರಹೋಗುವಂತೆ ಹೇಳಿದ್ದಾರೆ. ಆದರೆ, ಯುವತಿಯು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದನ್ನು ಹರಿಬಿಟ್ಟು, ತಮ್ಮ ವಿವಾಹವು ಜನವರಿಯಲ್ಲೇ ಆಗಿರುವುದಾಗಿಯೂ, ಈಗ ನಡೆಯುತ್ತಿದ್ದದ್ದು ಔಪಚಾರಿಕ ವಿವಾಹ ಎಂಬುದಾಗಿಯೂ ಸ್ಪಷ್ಟನೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಫತೇಪುರ್:</strong> ‘ನಾಯಿ ಬೊಗಳಿದರೆ ದೇವಲೋಕ ಹಾಳಾದೀತೆ’ ಎಂಬ ಗಾದೆ ಮಾತನ್ನು ಎಲ್ಲರೂ ಕೇಳಿರುತ್ತೇವೆ. ನಿಜ, ನಾಯಿ ಬೊಗಳಿದರೆ, ಯಾರೂ ಸಹ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಇಲ್ಲೊಂದು ಪ್ರಕರಣದಲ್ಲಿ ನಾಯಿ ಬೊಗಳಿದ ಕಾರಣಕ್ಕೆ ವಿವಾಹವೇ ನಿಂತುಹೋಗಿರುವ ಘಟನೆಯೊಂದು ನಡೆದಿದೆ. </p><p>ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಸಂಭ್ರಮದ ವಿವಾಹ ಕಾರ್ಯಕ್ರಮವೊಂದು ಸಾಕುನಾಯಿ ಬೊಗಳಿದ ಕಾರಣಕ್ಕೆ ನಿಂತುಹೋಗಿದೆ. ನಾಯಿಯು ವಧು ಹಾಗೂ ವರ ಎರಡೂ ಕುಟುಂಬಗಳ ಘರ್ಷಣೆಗೆ ಕಾರಣವಾಗಿದೆ, ಈ ಘರ್ಷಣೆ ಹಿಂಸಾತ್ಮಕ ರೂಪ ಪಡೆದುಕೊಂಡಿದೆ.</p><p>ಸುನಿಲ್ ಕುಮಾರ್ ಮತ್ತು ಸರೋಜ್ ಗುಪ್ತಾ ಎಂಬುವವರ ಮಗಳು ತಾನ್ಯಾ ಕೇಶರ್ವಾನಿ ಮತ್ತು ರಾಕೇಶ್ ಚಂದಾ ಮತ್ತು ಬಬ್ಲಿ ದೇವಿ ಅವರ ಮಗ ಸುಮಿತ್ ಇಬ್ಬರು ಪ್ರೀತಿಸಿ ಜನವರಿಯಲ್ಲಿ ವಿವಾಹವಾಗಿದ್ದರು. ಆದರೆ, ಕುಟುಂಬ ಸದಸ್ಯರು ಈ ಜೋಡಿಯ ಔಪಚಾರಿಕ ವಿವಾಹ ಕಾರ್ಯಕ್ರಮವನ್ನು ಫೆಬ್ರುವರಿ 18 ರಂದು ಫತೇಪುರ ಹಿಲ್ಲೆಯಲ್ಲಿ ಆಯೋಜನೆ ಮಾಡಿದ್ದರು.</p><p>ಆದರೆ, ಸುಗಮವಾಗಿ ನಡೆಯಬೇಕಿದ್ದ ವಿವಾಹ ಕಾರ್ಯಕ್ರಮವು ನಾಯಿಯಿಂದಾಗಿ ನಿಂತು ಹೋಗಿದೆ. ಮಾತ್ರವಲ್ಲ, ಉಭಯ ಕುಟುಂಬಗಳ ನಡುವೆ ನಡೆದ ಘರ್ಷಣೆಯಲ್ಲಿ ಅನೇಕರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. </p><p><strong>ನಾಯಿಯಿಂದಾದ ಪ್ರಮಾದವೇನು?</strong></p><p>ಮದುವೆ ದಿನ ಬೆಳಿಗ್ಗೆ 4 ಗಂಟೆ ಸುಮಾರಿಗೆ ಉಭಯ ಕುಟುಂಬ ಸದಸ್ಯರು ಹಾಗೂ ಬಂಧುಗಳು ಒಂದೆಡೆ ಸೇರಲು ಪ್ರಾರಂಭಿಸಿದರು. ಆ ಸಂದರ್ಭದಲ್ಲಿ ವಧುವಿನ ಕುಟುಂಬದ ಸಾಕು ನಾಯಿ ಆಕ್ರಮಣಕಾರಿಯಾಗಿ ಬೊಗಳಲು ಪ್ರಾರಂಭಿಸಿದೆ. ಈ ವೇಳೆ, ವರನ ಕಡೆಯ ಯುವಕನೊಬ್ಬ ನಾಯಿಯನ್ನು ಹೊಡೆಯುತ್ತಾನೆ. ಈ ವೇಳೆ ನಾಯಿಗೆ ಹೊಡೆದಿದ್ದಕ್ಕೆ ವಧುವಿನ ಕಡೆಯವರು ಆಕ್ರೋಶ ವ್ಯಕ್ತಪಡಿಸುತ್ತಾರೆ.</p><p>ಹೀಗೆ ಆರಂಭವಾದ ಘರ್ಷಣೆ ಮಾರಾಮಾರಿ ಹಂತ ತಲುಪುತ್ತದೆ. ಘರ್ಷಣೆಯ ವೇಳೆ, ಉಭಯ ಸಂಬಂಧಿಕರು ಸಿಕ್ಕ ಸಿಕ್ಕ ವಸ್ತುವಿನಿಂದ ಹೊಡೆದಾಡಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಮಹಿಳೆಯರು ಸೇರಿ ಕನಿಷ್ಠ 8 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.</p><p>ಬಳಿಕ ಉಭಯ ಕುಟುಂಬಸ್ಥರು ಖಾಗಾ ಪೊಲೀಸ್ ಠಾಣೆಗೆ ಹೋಗಿ, ಅಲ್ಲಿ ಪೊಲೀಸರ ಸಮ್ಮುಖದಲ್ಲಿ ಮದುವೆಯನ್ನು ಅಧಿಕೃತವಾಗಿ ರದ್ದುಗೊಳಿಸಿದ್ದಾರೆ. </p><p>ಆದರೆ, ವಧು ತಾನ್ಯಾ ಅವರು ವಿವಾಹ ರದ್ಧತಿಯನ್ನು ನಿರಾಕರಿಸಿ, ಕುಟುಂಬ ಸದಸ್ಯರ ಜೊತೆ ಮಾತನಾಡಿದ ಬಳಿಕ ಪ್ರಯಾಗ್ರಾಜ್ನ ತಮ್ಮ ಮನೆಯಿಂದ ವರನ ಮನೆಗೆ ಬಂದಿದ್ದಾಳೆ. ಆ ಸಂದರ್ಭದಲ್ಲಿ, ಹುಡುಗನ ಮನೆಯವರು ಆಕೆಯನ್ನು ಮನೆಯಿಂದ ಹೊರಹೋಗುವಂತೆ ಹೇಳಿದ್ದಾರೆ. ಆದರೆ, ಯುವತಿಯು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದನ್ನು ಹರಿಬಿಟ್ಟು, ತಮ್ಮ ವಿವಾಹವು ಜನವರಿಯಲ್ಲೇ ಆಗಿರುವುದಾಗಿಯೂ, ಈಗ ನಡೆಯುತ್ತಿದ್ದದ್ದು ಔಪಚಾರಿಕ ವಿವಾಹ ಎಂಬುದಾಗಿಯೂ ಸ್ಪಷ್ಟನೆ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>